Advertisement

Telangana: ಉದ್ಯೋಗ ಕಳೆದು ಕೊಂಡವರಿಗೆ ನೆರವು

12:32 AM Jan 25, 2024 | Team Udayavani |

ಹೈದರಾಬಾದ್‌: ಇತರ ದೇಶಗಳಿಂದ ಕೆಲಸ ಕಳೆದುಕೊಂಡು ತವರು ರಾಜ್ಯಕ್ಕೆ ಬರುವವರಿಗೆ ನೆರವಾಗುವ ನಿಟ್ಟಿನಲ್ಲಿ ವಿಶೇಷ ನಿಯಮ ಹೊಂದಲು ತೆಲಂಗಾಣ ಮುಂದಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಜತೆಗೂಡಿ ತೆಲಂಗಾಣದ ಕಾರ್ಮಿಕ ಇಲಾಖೆ ಈ ನಿಯಮಗಳನ್ನು ರೂಪಿಸಲಿದೆ.

Advertisement

ಇಂಥ ನಿಯಮಗಳನ್ನು ಹೊಂದಲಿರುವ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೂ ಅದು ಪಾತ್ರವಾಗಲಿದೆ. ಈ ಕೇಂದ್ರಕ್ಕೆ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ವಲಸೆ ಸಂಘ ಟನೆಯೂ ನೆರವು ನೀಡಲಿದೆ. ಹೈದರಾಬಾದ್‌ನಲ್ಲಿ ಅವರಿಗೆ ಉದ್ಯೋಗ ನೀಡುವ ಬಗ್ಗೆ ಸಲಹಾ ಸಂಸ್ಥೆಯೊಂದನ್ನು ಸ್ಥಾಪಿಸಲಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ನೇಪಾಳ ಮತ್ತು ಪಾಕಿಸ್ತಾನ ಮಾತ್ರ ಇಂಥ ನಿಯಮ ಜಾರಿಗೊಳಿಸಿದ ರಾಷ್ಟ್ರಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next