Advertisement
ತೆಲಂಗಾಣ ರಾಜ್ಯ ರಚನೆಯಾಗಿ 4 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರವಿವಾರ ಹೈದರಾಬಾದ್ನ ಹೊರ ವಲಯದ ಕೊನಗಾರ ಕಾಲನ್ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಸಿಎಂ ಕೆಸಿಆರ್, “ನಾನು ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುತ್ತೇನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಟಿಆರ್ಎಸ್ನ ಎಲ್ಲ ಸದಸ್ಯರೂ ನನಗೆ ತೆಲಂಗಾಣದ ಭವಿಷ್ಯವನ್ನು ನಿರ್ಧರಿ ಸಲು ಅವಕಾಶ ನೀಡಿದ್ದಾರೆ. ಹೀಗಾಗಿ, ತೆಲಂಗಾಣ, ಟಿಆರ್ಎಸ್ ಮತ್ತು ಜನರ ಹಿತಾಸಕ್ತಿಯನ್ನು ಪರಿಗಣಿಸಿ ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ಬಗ್ಗೆ ಮೊದಲೇ ತಿಳಿಸುತ್ತೇನೆ’ ಎಂದಿದ್ದಾರೆ. ಈ ಮೂಲಕ ಸದ್ಯಕ್ಕೆ ಅವಧಿಪೂರ್ವ ಚುನಾವಣೆಗೆ ಹೋಗುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದರೂ, ಮುಂದೆ ಅಂಥ ನಿರ್ಧಾರ ಕೈಗೊಳ್ಳಲೂಬಹುದು ಎಂಬ ಸುಳಿವು ನೀಡಿದ್ದಾರೆ.ರ್ಯಾಲಿಗೂ ಮುನ್ನ ತೆಲಂಗಾಣ ಸಂಪುಟ ಸಭೆ ನಡೆದಿದ್ದು, ಅಲ್ಲಿ ಕೆಸಿಆರ್ ಅವರು ವಿಧಾನಸಭೆ ವಿಸರ್ಜನೆ ಕುರಿತು ಘೋಷಿಸ ಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಅಲ್ಲೂ ಅವರು ಯಾವುದೇ ಸುಳಿವು ನೀಡಿರಲಿಲ್ಲ. ಇದೇ ವೇಳೆ, ಸೆ.6ಕ್ಕೆ ಮತ್ತೂಂದು ಸಂಪುಟ ಸಭೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Related Articles
ಹೈದರಾಬಾದ್ನಿಂದ 25 ಕಿ.ಮೀ. ದೂರದ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದ ಟಿಆರ್ಎಸ್ನ ಬೃಹತ್ ರ್ಯಾಲಿಗೆ ಜನ ಸಾಗರವೇ ಹರಿದುಬಂದಿತ್ತು.ಸುಮಾರು 2 ಸಾವಿರ ಎಕರೆ ಪ್ರದೇಶ ದಲ್ಲಿ ಈ ರ್ಯಾಲಿ ನಡೆದಿದ್ದು, ಇದನ್ನು “ಎಲ್ಲ ಸಭೆಗಳ ಮಹಾತಾಯಿ’ ಎಂದೇ ಬಣ್ಣಿಸಲಾಗಿತ್ತು. ತೆಲಂಗಾಣ ರಾಜ್ಯ ರಚನೆಯಾಗಿ 4 ವರ್ಷ ಪೂರ್ಣ ಗೊಂಡ ಕಾರಣ ಈ ಪ್ರಗತಿ ನಿವೇದನಾ ಸಭಾವನ್ನು ಆಯೋಜಿಸಲಾಗಿತ್ತು.
Advertisement