Advertisement

ತೆಕ್ಕಟ್ಟೆ: ಅನಾರೋಗ್ಯದಿಂದ ಬಾಣಂತಿ ಸಾವು

09:20 PM Feb 19, 2023 | Team Udayavani |

ಕೋಟ: ತೆಕ್ಕಟ್ಟೆ ನಿವಾಸಿ ಗುಣವತಿ ದೇವಾಡಿಗ (39) ದಿಢೀರ್‌ ಅನಾರೋಗ್ಯದಿಂದ ಫೆ.18 ರಂದು ಮೃತಪಟ್ಟಿದ್ದಾರೆ.

Advertisement

ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಇತ್ತೀಚೆಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. 21 ದಿನಗಳ ಅನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಿದ್ದು, ಒಂದು ವಾರದ ಹಿಂದೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳಿಯ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು.

ಫೆ. 18ರಂದು ಮಗುವಿಗೆ ಹಾಲೂಡಿಸುತ್ತಿದ್ದಾಗ ನಿತ್ರಾಣಗೊಂಡು ಕುಸಿದುಬಿದ್ದಿದ್ದರು. ತತ್‌ಕ್ಷಣ ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದರು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಸೇನೆ ಹೆಸರು ಮತ್ತು ಚಿಹ್ನೆ ಹಂಚಿಕೆ ಗದ್ದಲದಲ್ಲಿ ಭಾಗಿಯಾಗುವುದಿಲ್ಲ: ಶರದ್ ಪವಾರ್

Advertisement

Udayavani is now on Telegram. Click here to join our channel and stay updated with the latest news.

Next