Advertisement

ರೈಲು ಲೇಟಾಗಿದ್ದಕ್ಕೆ 4 ಲಕ್ಷ ಪರಿಹಾರ!

12:14 AM Aug 25, 2021 | Team Udayavani |

ಹೊಸದಿಲ್ಲಿ: ತೇಜಸ್‌ ರೈಲು ಲೇಟಾಗಿ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ 4 ಲಕ್ಷ ರೂ. ಪರಿಹಾರ ನೀಡಲು ಐಆರ್‌ಸಿಟಿಸಿ ಮುಂದಾಗಿದೆ.

Advertisement

ಕಳೆದ ಶನಿವಾರ ದಿಲ್ಲಿ ರೈಲು ನಿಲ್ದಾಣಕ್ಕೆ ತೇಜಸ್‌ ರೈಲು ಎರಡೂವರೆ ಗಂಟೆ ತಡವಾಗಿ ಬಂದಿದೆ. ಮಳೆಯಿಂದಾಗಿ ಸಿಗ್ನಲ್‌ ತೊಂದರೆಯುಂಟಾದ ಹಿನ್ನೆಲೆ ರೈಲು ತಡವಾಗಿದೆ. ಅದೇ ರೀತಿ ರವಿವಾರ ಲಕ್ನೋ- ಹೊಸದಿಲ್ಲಿ ರೈಲು 1 ಗಂಟೆ ತಡವಾಗಿ ಆಗಮಿಸಿದೆ.

ಐಆರ್‌ಸಿಟಿಸಿ ಈ ಮೊದಲು ಹೇಳಿರುವಂತೆ ತೇಜಸ್‌ ರೈಲು 1 ಗಂಟೆ ತಡವಾದರೆ ತಲಾ 100 ರೂ. ಹಾಗೂ 2 ತಾಸು ಅಥವಾ ಅದಕ್ಕಿಂತ ಹೆಚ್ಚು ಸಮಯ ತಡವಾದರೆ 250 ರೂ. ಪರಿಹಾರವನ್ನು ಪ್ರಯಾಣಿಕರಿಗೆ ನೀಡಬೇಕು. ಹೀಗಾಗಿ ಎರಡೂ ರೈಲಿನ 2,035 ಪ್ರಯಾಣಿಕರಿಗೆ 4,49,600 ರೂ. ಸಿಗಲಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆೆ.

Advertisement

Udayavani is now on Telegram. Click here to join our channel and stay updated with the latest news.

Next