Advertisement

ಭರ್ಜರಿ ಜಯ: ಕೃಷ್ಣ ದ್ವಯರ ಸಾಧನೆ, ರಣಜಿ ಸೆಮಿಫೈನಲ್ ಗೆ ಜಿಗಿದ ಕರ್ನಾಟಕ

09:57 AM Feb 25, 2020 | keerthan |

ಜಮ್ಮು: ರಣಜಿ ಫೈನಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಕರ್ನಾಟಕ ತಂಡ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯವನ್ನು ರಾಜ್ಯ ತಂಡ 167 ರನ್ ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿದೆ.

Advertisement

ಇಲ್ಲಿನ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ದಿನದಾಟದ ಅಂತ್ಯದ ಕರ್ನಾಟಕ 245 ರನ್ ಗೆ ಐದು ವಿಕೆಟ್ ಕಳೆದುಕೊಂಡಿತ್ತು. ಇಂದು ಆಟ ಮುಂದುವರಿಸಿದ ಕೃಷ್ಣಮೂರ್ತಿ ಸಿದ್ದಾರ್ಥ್ 98 ರನ್ ಗಳಿಸಿ ಔಟಾದರು. ಶರತ್ 34 ರನ್ ಗಳಿಸಿ ಔಟಾದರು. ಅಂತಿಮವಾಗಿ 326 ರನ್ ಗೆ ಆಲ್ ಔಟಾಯಿತು. ಜಮ್ಮು ಕಾಶ್ಮೀರದ ಅಬಿದ್ ಮುಶ್ತಾಕ್ ಆರು ವಿಕೆಟ್ ಪಡೆದರು.

ಗೆಲುವಿಗೆ 330 ರನ್ ಕಠಿಣ ಗುರಿ ಪಡೆದ ಜಮ್ಮು ಕಾಶ್ಮೀರ 163 ರನ್ ಗೆ ಆಲ್ ಔಟ್ ಆಯಿತು. ಶುಭಮ್ ಖಜಾರಿಯಾ ಮತ್ತು ಶುಭಮ್ 30 ರನ್ ಗಳಿಸಿದರು. ಭಾರತದ ಪರ ಕೃಷ್ಣಪ್ಪ ಗೌತಮ್ ಏಳು ವಿಕೆಟ್ ಕಬಳಿಸಿದರು. ಭಾರತ 167 ರನ್ ವಿಜಯ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next