Advertisement

ವಿಶ್ವಕಪ್ ಕದನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

10:07 AM Jun 28, 2019 | keerthan |

ಮ್ಯಾಂಚೆಸ್ಟರ್: ವಿಶ್ವಕಪ್ ಕೂಟದ 34ನೇ ಪಂದ್ಯಕ್ಕೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನ ಸಜ್ಜಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ.

Advertisement

ಭಾರತ ತಂಡ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಕಳೆದ ಪಂದ್ಯಕ್ಕೆ ಆಡಿದ ತಂಡವನ್ನೇ ಇಲ್ಲಿ ಕಣಕ್ಕಿಳಿಸಲಾಗಿದೆ. ಆದರೆ ವಿಂಡೀಸ್ ಎರಡು ಬದಲಾವಣೆ ಮಾಡಿದೆ. ಇವಿನ್ ಲೂಯಿಸ್ ಬದಲು ಸುನೀಲ್ ಆಂಬ್ರಿಸ್ ಸ್ಥಾನ ಪಡೆದರೆ, ಆಶ್ಲೆ ನರ್ಸ್ ಬದಲು ಫ್ಯಾಭಿನ್ ಅಲೆನ್ ತಂಡ ಸೇರಿದ್ದಾರೆ.

ಭಾರತ ಈ ಪಂದ್ಯ ಗೆದ್ದರೆ ತನ್ನ ಸೆಮಿ ಹಾದಿಯನ್ನು ಇನ್ನಷ್ಟು ಸುಲಭಗೊಳಿಸಲಿದೆ. ಆದರೆ ವೆಸ್ಟ್ ಇಂಡೀಸ್ ಈ ಪಂದ್ಯ ಸೋತರೆ ಸೆಮಿ ರೇಸ್ ನಿಂದಲೇ ಹೊರ ಬೀಳಲಿದೆ.

ಈ ವಿಶ್ವಕಪ್ ಕೂಟದಲ್ಲಿ ಈ ಮೈದಾನದಲ್ಲಿ ಇದುವರೆಗೆ ಮೂರು ಪಂದ್ಯಗಳು ನಡೆದಿದ್ದು, ಮೂರು ಹೈ ಸ್ಕೋರಿಂಗ್ ಪಂದ್ಯಗಳಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 336, 397 ಮತ್ತು 291 ರನ್ ಗಳಿಸಿವೆ. ವಿಶೇಷವೇನೆಂದರೆ ಈ ಮೂರು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯಿಸಿವೆ.

ತಂಡಗಳು
ಭಾರತ: ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾ), ವಿಜಯ್ ಶಂಕರ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ.

Advertisement

ವೆಸ್ಟ್ ಇಂಡೀಸ್: ಕ್ರಿಸ್ ಗೇಲ್, ಸುನೀಲ್ ಆಂಬ್ರಿಸ್, ಶಾಯ್ ಹೋಪ್, ನಿಕೋಲಸ್ ಪೂರನ್, ಶಿಮ್ರನ್ ಹೆತ್ಮೈರ್, ಜೇಸನ್ ಹೋಲ್ಡರ್ (ನಾ), ಕಾರ್ಲೊಸ್ ಬ್ರಾಥ್ ವೇಟ್, ಫ್ಯಾಭಿನ್ ಆಲೇನ್, ಕೆಮರ್ ರೋಚ್, ಶೆಲ್ಡನ್ ಕಾಟ್ರೆಲ್, ಒಶಾನೆ ಥೋಮಸ್.

Advertisement

Udayavani is now on Telegram. Click here to join our channel and stay updated with the latest news.

Next