Advertisement

ಶಿಶಿರ ಉದ್ಘಾಟನೆ 

10:21 AM Dec 06, 2017 | Team Udayavani |

ಮಂಗಳಾದೇವಿ: ಪ್ರತಿಯೊಬ್ಬ ಸಾಧಕನ ಹಿಂದೆ ಶಿಕ್ಷಕನ ಪ್ರಭಾವ ಇದ್ದೇ ಇರುತ್ತದೆ. ವಿದ್ಯಾರ್ಥಿಯನ್ನು ಸಮಾಜಮುಖಿಯನ್ನಾಗಿ ಮಾಡಲು ಯೋಗ್ಯ ಶಿಕ್ಷಕನಿಂದ ಮಾತ್ರ ಸಾಧ್ಯ. ಹೀಗಾಗಿ ತರಗತಿಗಳಲ್ಲಿ ಶಿಕ್ಷಕ ಸಮತೋಲನ ಭಾವದಿಂದ ಕಾರ್ಯನಿರ್ವಹಿಸುವುದು ಅನಿವಾರ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ ಹೇಳಿದರು.

Advertisement

ಅವರು ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಶಿಕ್ಷಕರ ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನೆ ‘ಶಿಶಿರ’ವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕನ ರಚನಾತ್ಮಕ ಕಾರ್ಯವು ವಿದ್ಯಾರ್ಥಿಯ ಪಥವನ್ನು ಗಟ್ಟಿಗೊಳಿಸುತ್ತದೆ. ಶಿಕ್ಷಣ, ಸಂಸ್ಕೃತಿ, ಸಾಹಿತ್ಯ ಪ್ರಕಾರಗಳನ್ನು ಸಂಪನ್ನಗೊಳಿಸುವ ಜತೆಗೆ ಪ್ರಜಾಪ್ರಭುತ್ವ ಸರಕಾರದ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಶ್ರೀ ಮಂಗಳಾದೇವಿ ಕ್ಷೇತ್ರದ ಮೊಕ್ತೇಸರ ರಮಾನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಗಳ ಜ್ಯೋತಿ ಸಮಗ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ ಕುಮಾರ ಶೆಟ್ಟಿ ಅವರನ್ನು ಡಾ|  ಮೊಯಿಲಿ ಪುರಸ್ಕರಿಸಿದರು. ರವೀಂದ್ರ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.

ತುಳು ಒಕ್ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಶುಭ ಹಾರೈಸಿದರು. ಹೆಬಿಕ್‌ ಟೆಕ್ನಿಕಲ್‌ ಸಂಸ್ಥೆಯ ಪ್ರಾಂಶುಪಾಲ ಡಾ| ಚೇತನ, ಶಿಶಿರದ ಉಪಾಧ್ಯಕ್ಷ ಜಿ.ಕೆ. ಭಟ್‌ ಸೇರಾಜೆ, ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ, ಕೋಶಾಧಿಕಾರಿ ಅಶೋಕಕುಮಾರ್‌ ಶೆಟ್ಟಿ, ರೂಪಾಕ್ಷ ಉಪಸ್ಥಿತರಿದ್ದರು. ಶಿಶಿರದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಸ್ವಾಗತಿಸಿದರು. ಮೇಘಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರವಿ ಅಲೆವೂರಾಯ ಹಾಗೂ ಪುರುಷೋತ್ತಮ ಭಟ್‌ ತಂಡದಿಂದ ಯಕ್ಷಗಾನ ಪ್ರದರ್ಶನಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next