Advertisement

ಶಿಕ್ಷಕರಲ್ಲೇ ಅಶಿಸ್ತು ಇರುವಾಗ ಮಕ್ಕಳಿಗೆ ಏನು ಕಲಿಸುವರು?

01:25 PM Feb 10, 2022 | Team Udayavani |

ಎಚ್‌.ಡಿ.ಕೋಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಜವಾಬ್ದಾರಿ ಹೊತ್ತಿರುವ ಶಿಕ್ಷಕರೇ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ವಸತಿ ಶಾಲೆ ಎಂದರೆ ಶಿಕ್ಷಕರಿಗೆ ತುಸು ಹೆಚ್ಚು ಹೊಣೆ ಇರುತ್ತದೆ. ಆದರೆ, ಇವರಿಗೆ ಸಮ ಯದ ಪರಿವೇ ಇರುವುದಿಲ್ಲ. ಇಷ್ಟಬಂದಾಗಶಾಲೆ ಬರುತ್ತಾರೆ. ಇನ್ನು ರಾತ್ರಿ ವೇಳೆ ಮಕ್ಕಳನ್ನುನೋಡಿ ಕೊಳ್ಳಲು ಯಾರೊಬ್ಬರೂ ಇರುವುದಿಲ್ಲ.ಇದರ ಜೊತೆಗೆ ಬಾಲಕಿಯರು ಹಾಗೂ ಬಾಲಕರುರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಮಲಗುವಂತಹ ಪರಿಸ್ಥಿತಿ ಇದೆ.

Advertisement

ಈ ದೃಶ್ಯಗಳು ಸರಗೂರು ತಾಲೂಕಿನಗಡಿಭಾಗದ ಬಿ.ಮಟಕೆರೆ ಗ್ರಾಮದ ಆದಿವಾಸಿಆಶ್ರಯ ಶಾಲೆಯಲ್ಲಿ ಕಂಡು ಬರುತ್ತಿದ್ದು, ಒಟ್ಟಾರೆಈ ಶಾಲೆ ಅವ್ಯವಸ್ಥೆಗಳ ಆಗರವಾಗಿದೆ.ಬಿ.ಮಟಕೆರೆ ತಾಲೂಕಿನ ಗಡಿಭಾಗದ ಗ್ರಾಮ.ಇಲ್ಲಿ ಬಹುಸಂಖ್ಯೆಯಲ್ಲಿ ಆದಿವಾಸಿಗರು ವಾಸವಾಗಿರುವುದರಿಂದ ಅವರ ಮಕ್ಕಳ ಶೈಕ್ಷಣಿಕ ಪ್ರಗತಿಯಉದ್ದೇಶದಿಂದ ಸರ್ಕಾರ ಬಿ.ಮಟಕೆರೆಯಲ್ಲಿ1ರಿಂದ 7ನೇ ತರಗತಿ ತನಕ ಆದಿವಾಸಿಗರಿಗಾಗಿ ಆಶ್ರಮ ಶಾಲೆ ಆರಂಭಿಸಿದೆ. ಶಾಲೆಯಲ್ಲಿ ಇಬ್ಬರು ನಿಯೋಜಿತ ಶಿಕ್ಷಕರು ಹಾಗೂ 3 ಹೊರಗುತ್ತಿಗೆಶಿಕ್ಷಕರು ಸೇರಿದಂತೆ ಒಟ್ಟು ಐವರು ಶಿಕ್ಷಕರುಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಶಿಕ್ಷಕರಿಗೆ ಸಮಯದ ಪರಿಜ್ಞಾನವಿಲ್ಲ. ತಾಲೂಕಿನ ಗಡಿಭಾಗವಾದ್ದರಿಂದ ಈ ಕುಗ್ರಾಮಕ್ಕೆ ಅಧಿಕಾರಿಗಳಭೇಟಿ ವಿರಳ ಎಂಬುದನ್ನು ಮನಗಂಡ ಶಿಕ್ಷಕರುಶಾಲೆಗೆ ರಜೆಯನ್ನೂ ಹಾಕುವುದಿಕಲ್ಲ. ಶಾಲೆಗೂ ಹಾಜರಾಗುವುದಿಲ್ಲ.

ಬುಧವಾರ ಬೆಳಗ್ಗೆ 10.30ಗಂಟೆಯಾದರೂ ಒಬ್ಬರು ಶಿಕ್ಷಕರು ಮಾತ್ರ ಇದ್ದರು. ಇಡೀ ಶಾಲೆಯಲ್ಲಿ ದಾಖಲಾತಿಯ ಅರ್ಧದಷ್ಟು ಮಕ್ಕಳು ಗೈರಾಗಿದ್ದರು. ಇನ್ನುಳಿದ ಶಿಕ್ಷಕರು 11.30 ಗಂಟೆ ಕಳೆದರೂ ಶಾಲೆಗೆ ಆಗಮಿಸಲೂ ಇಲ್ಲ, ಶಾಲೆಗೆಗೈರಾಗುವ ಅಥವಾ ತಡವಾಗಿಆಗಮಿಸುವ ವಿಚಾರವಾಗಿ ಶಾಲಾ ಮುಖ್ಯಶಿಕ್ಷಕರಿಗೂ ಮಾಹಿತಿ ನೀಡಿಲ್ಲ ಎಂಬುದು ಮುಖ್ಯಶಿಕ್ಷಕರಿಂದಲೇ ತಿಳಿದು ಬಂತು.

ಶಿಕ್ಷಕರಿಗೆ ಸಮಯದ ಪರಿವೇ ಇರುವುದಿಲ್ಲ. ಶೈಕ್ಷಣಿಕ ಪ್ರಗತಿಯ ಹೊಣೆಹೊತ್ತಿರುವ ಶಿಕ್ಷಕರೇ ಈ ರೀತಿ ಅಶಿಸ್ತು ತೋರಿದರೆ ಇನ್ನು ಮಕ್ಕಳಿಗೆ ಯಾವ ರೀತಿ ಬೋಧನೆ ಮಾಡುತ್ತಾರೆ. ಗ್ರಾಮೀಣ ಪ್ರದೇಶ ಅದರಲ್ಲೂ ಅದಿವಾಸಿ ಮಕ್ಕಳು ಓದಿನಲ್ಲಿ ಹಿಂದುಳಿದಿರುತ್ತಾರೆ.ಇವರ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಮಕ್ಕಳನ್ನು ಸರಿದಾರಿಗೆ ತರಬೇಕಾದರೇ ಹೀಗೆ ಅಶಿಸ್ತು ತೋರುವುದು ಸರಿಯಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಂಡು ಈಆಶ್ರಮ ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

ಬಿ.ಮಟಕೆರೆ ಈ ಆಶ್ರಮ ಶಾಲೆಯಲ್ಲಿ 62 ವಿದ್ಯಾರ್ಥಿಗಳ ದಾಖಲಾತಿ ಇದೆ. ಆದರೆ, ಶಾಲೆಗೆ ಆಗಮಿಸುವುದು 35ರಿಂದ 40 ಮಕ್ಕಳು ಮಾತ್ರ. ಈ ವಸತಿ ಶಾಲೆಯಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಯಾವೊಬ್ಬ ಶಿಕ್ಷಕರೂ ಇರುವುದಿಲ್ಲ. ಬದಲಾಗಿ ಅಡುಗೆ ಸಿಬ್ಬಂದಿಗೆ ಈ ಹೊಣೆ ಹೊರಿಸಿದ್ದಾರೆ. ಜೊತೆಗೆ ರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಬಾಲಕರು ಹಾಗೂ ಬಾಲಕಿಯರು ಮಲಗಬೇಕಾದ ಪರಿಸ್ಥಿತಿ ಇದೆ. ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಲ್ಲ. ಪೋಷಕರಾದ ಆದಿವಾಸಿಗಳಲ್ಲಿ ಬಹುತೇಕ ಮಂದಿ ದುಷcಟಗಳಿಗೆ ಬಲಿಯಾಗಿರುತ್ತಾರೆ. ಪೋಷಕರ ಚಾಳಿ ಕೆಲ ಮಕ್ಕಳಿಗೆ ಬಂದಿರುತ್ತದೆ. ಹೀಗಾಗಿ ಯಾವುದೇ ರೀತಿ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

Advertisement

ಬಾಲಕ, ಬಾಲಕಿಯರು ಮಲಗಲು ಒಂದೇ ಕೊಠಡಿ :

ಬಿ.ಮಟಕೆರೆ ಈ ಆಶ್ರಮ ಶಾಲೆಯಲ್ಲಿ 62 ವಿದ್ಯಾರ್ಥಿಗಳ ದಾಖಲಾತಿ ಇದೆ. ಆದರೆ, ಶಾಲೆಗೆ ಆಗಮಿಸುವುದು 35ರಿಂದ 40 ಮಕ್ಕಳು ಮಾತ್ರ. ಈ ವಸತಿ ಶಾಲೆಯಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಯಾವೊಬ್ಬ ಶಿಕ್ಷಕರೂ ಇರುವುದಿಲ್ಲ. ಬದಲಾಗಿ ಅಡುಗೆ ಸಿಬ್ಬಂದಿಗೆ ಈ ಹೊಣೆ ಹೊರಿಸಿದ್ದಾರೆ. ಜೊತೆಗೆ ರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಬಾಲಕರು ಹಾಗೂ ಬಾಲಕಿಯರು ಮಲಗಬೇಕಾದ ಪರಿಸ್ಥಿತಿ ಇದೆ. ಪ್ರತ್ಯೇಕಕೊಠಡಿ ವ್ಯವಸ್ಥೆ ಮಾಡಿಲ್ಲ. ಪೋಷಕರಾದ ಆದಿವಾಸಿಗಳಲ್ಲಿ ಬಹುತೇಕ ಮಂದಿ ದುಷcಟಗಳಿಗೆ ಬಲಿಯಾಗಿರುತ್ತಾರೆ. ಪೋಷಕರ ಚಾಳಿ ಕೆಲ ಮಕ್ಕಳಿಗೆ ಬಂದಿರುತ್ತದೆ. ಹೀಗಾಗಿ ಯಾವುದೇ ರೀತಿ ಅವಘಡಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಆಶ್ರಮ ಶಾಲೆಗಳ ಅವ್ಯವಸ್ಥೆ ಕುರಿತು ಆಗಾಗ ಸಭೆ ನಡೆಸುತ್ತಿರುತ್ತೇವೆ. ಕಳೆದ 3 ದಿನಗಳ ಹಿಂದಷ್ಟೇ ಸಭೆಯಲ್ಲಿ ಆಶ್ರಯಶಾಲೆಯಲ್ಲಿ ಉಳಿದುಕೊಂಡು ಕರ್ತವ್ಯ ನಿರ್ವಹಿಸ ಬೇಕು ಎಂದು ಸೂಚನೆ ನೀಡಿದ್ದೇವೆ. ಆದರೂ ಶಿಕ್ಷಕರು ಸರಿ ಪಡಿಸಿ ಕೊಳ್ಳುತ್ತಿಲ್ಲ, ಇನ್ನು ಬಿ.ಮಟಕೆರೆ ಆಶ್ರಯ ಶಾಲೆಯಲ್ಲಿ ಇಂದಿನಿಂದಲೇ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ಪ್ರತೇಕವಾಗಿ ರಾತ್ರಿ ವೇಳೆ ಮಲಗಿಸಲು ಕ್ರಮವಹಿಸುತ್ತೇವೆ. – ನಾರಾಯಣ, 2 ಸ್ವಾಮಿ ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ

 

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next