Advertisement

ಶಿಕ್ಷಕ ವೃತ್ತಿ ಪವಿತ್ರ: ವೀರೇಶಪ್ಪ

06:43 AM Jun 03, 2020 | Suhan S |

ಕುರುಗೋಡು: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವೃತ್ತಿ ಗೌರವ ಎತ್ತಿಹಿಡಿಯಬೇಕು ಎಂದು ಮುಖ್ಯಗುರು ಬಿ.ವೀರೇಶಪ್ಪ ಹೇಳಿದರು.

Advertisement

ಸಮೀಪದ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನೋತ್ಸವ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಮ್ಮ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲೆ ಅಭಿವೃದ್ಧಿಯಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಪ್ರಮುಖವಾದದ್ದು, ವಿದ್ಯಾರ್ಥಿಗಳಲ್ಲಿ ಉತ್ತಮವಾದ ಚಿಂತನೆಯನ್ನು ರೂಪಿಸಿ ಅವರನ್ನು ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರ ಮೇಲಿದೆ ಎಂದರು.

ನಂತರ ಶಾಲೆಯ ಎಸ್‌ ಡಿಎಂಸಿ ಅಧ್ಯಕ್ಷ ಗುಡಿಸಲಿ ಖಾಸಿಂ ಸಾಬ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ. ವೀರೇಶಪ್ಪ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಎಸ್‌. ಸದ್ಯೋಜಾತಪ್ಪ, ಎಚ್‌. ಜಡೇಶ್‌, ಆದೇಶ್‌, ವೀರೇಶಪ್ಪ, ಜಿ. ಲೋಕೇಶ್‌, ಶಿವನಗೌಡರ ರಾಮು, ಎಚ್‌.ಮಲ್ಲೇಶ್‌, ವೈ. ಧನುಂಜಯ್ಯ ರೆಡ್ಡಿ, ಮಂಜುನಾಥ, ಶಿವರುದ್ರಪ್ಪ, ಛಲವಾದಿ ಮಹಾಸಭಾದ ಪದಾಧಿಕಾರಿಗಳು ಹಾಗೂ ಅತಿಥಿ ಶಿಕ್ಷಕ ವೃಂದದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next