Advertisement

ಕಿಡಿಗೇಡಿಗಳಿಂದ ಟೀ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮ

11:42 AM Aug 31, 2021 | Team Udayavani |

ಚಿಂತಾಮಣಿ : ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿದ್ದ ಟಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಂಗಡಿ ಸಂಪುರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಠಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಾಲೂಕಿನ‌ ಕಾಗತಿ ಗ್ರಾಪಂ ವ್ಯಾಪ್ತಿಯ ಚೊಕ್ಕರೆಡ್ಡಿಹಳ್ಳಿ ಗ್ರಾಮದ ಚಂದ್ರಪ್ಪ ಎಂಬುವರಿಗೆ ಸೇರಿದ ಟೀ ಅಂಗಡಿಗೆ ಬೆಂಕಿ ಬಿದ್ದಿದ್ದು ಅಂಗಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಪರಿಣಾಮ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಘಟನೆ ನಡೆದಿದೆ.

ಚಂದ್ರಪ್ಪ ಅಂಗವಿಕಲನಾಗಿದ್ದು ಜೀವನೋಪಾಯಕ್ಕಾಗಿ ಗ್ರಾಮದ ಚೇಳೂರು ಮತ್ತು ಚಿಂತಾಮಣಿಯ‌ ಮುಖ್ಯ ರಸ್ತೆ ಬದಿಯಲ್ಲಿ ಟಿ ಅಂಗಡಿ ಹಾಕಿಕೊಂಡು ಜೀವನ‌ ನಡೆಸುತ್ತಿದ್ದ ಎನ್ನಲಾಗಿದೆ.

ಅಂಗಡಿಗೆ ಯಾರೊ ಕಿಡಿಗೇಡಿಗಳು ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದು ಈ ವೇಳೆ ಅಂಗಡಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಅಂಗಡಿಯೆಲ್ಲಾ ಸುಟ್ಟು ಭಸ್ಮವಾಗಿದೆ.

ಇದನ್ನೂ ಓದಿ :ಮೈಸೂರು ಪ್ರಕರಣ: ತಮಿಳುನಾಡಿನಲ್ಲಿ 6ನೇ ಆರೋಪಿಯನ್ನು ಸೆರೆ  ಹಿಡಿದ ಪೊಲೀಸರು

Advertisement

ಇನ್ನು ಅಂಗಡಿಯ ಕೂಗಳತೆ ದೂರದಲ್ಲೆ ಜನವಾಸವಾಗಿದ್ದು ಅದೃಷ್ಟವಶಾತ್ ಸ್ಪೋಟದಿಂದ ಯಾವುದೆ ಅನಾಹುತವಾಗಿಲ್ಲ.
ವಿಷಯ ತಿಳಿದ ಕೂಡಲೆ ಆಗ್ನಿ ಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next