Advertisement

TB Dam; ಕ್ರೆಸ್ಟ್‌ ಗೇಟ್‌ ಕೊಚ್ಚಿ ಹೋಗಿರುವುದಕ್ಕೆ ಸರಕಾರವೇ ನೇರ ಹೊಣೆ: ವಿಜಯೇಂದ್ರ

10:08 PM Aug 13, 2024 | keerthan |

ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ ಗೇಟ್‌ ಕೊಚ್ಚಿ ಹೋಗುವುದಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಹೊರಬೇಕು. ಅಣೆಕಟ್ಟೆಯ 17ರಿಂದ 33ನೇ ಕ್ರೆಸ್ಟ್‌ ಗೇಟ್‌ಗಳ ನಿರ್ವಹಣೆ ಜವಾಬ್ದಾರಿ ರಾಜ್ಯ ಸರಕಾರದ್ದೇ ಆಗಿದ್ದು, ನಿರ್ಲಕ್ಷ್ಯ ಯಾರದ್ದು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

Advertisement

ಬೆಂಗಳೂರಿನ ವಸಂತನಗರದಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಚಾಲನೆ ನಿಡಿ ಮಾತನಾಡಿದ ಅವರು, ತುಂಗಭದ್ರಾ ಮಂಡಳಿ ಕೇಂದ್ರ ಸರಕಾರದ ಅಧೀನದಲ್ಲಿದೆ. ಈ ಅವಘಡಕ್ಕೆ ಕೇಂದ್ರವೇ ಹೊಣೆ ಎಂದು ಪ್ರತ್ಯಾರೋಪ ಮಾಡುತ್ತಿದ್ದಾರೆ. ಅಣೆಕಟ್ಟಿನ 17ರಿಂದ 33 ಕ್ರೆಸ್ಟ್‌ಗೇಟ್‌ಗಳ ನಿರ್ವಹಣೆ ರಾಜ್ಯ ಸರಕಾರದ್ದಾಗಿದೆ. ಕೇಂದ್ರ ಅಧೀನದ ತುಂಗಭದ್ರಾ ಮಂಡಳಿ ಸುರಕ್ಷೆ ಬಗ್ಗೆ ಮಾಡಿದ ಶಿಫಾರಸುಗಳನ್ನು ನಿರ್ಲಕ್ಷಿಸಿದವರು ಯಾರು? ಎಂದು ಪ್ರಶ್ನಿಸಿದರು.

ಜನೌಷಧ ಕೇಂದ್ರ ಮುಚ್ಚಲು ಯತ್ನ

ಒಂದಿಲ್ಲೊಂದು ಕಾರಣವೊಡ್ಡಿ ಕೇಂದ್ರದ ಜತೆಗೆ ರಾಜ್ಯ ಸರಕಾರ ಸದಾ ಸಂಘರ್ಷದ ಧೋರಣೆ ಪ್ರದರ್ಶಿಸುತ್ತಿದೆ. ಅದೇ ಹಾದಿಯಲ್ಲಿ ಮುಂದುವರಿದು ಜನೌಷಧ ಕೇಂದ್ರಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next