Advertisement

‘ತೌಕ್ತೆ’ ಅಬ್ಬರ : ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಬಿ.ಎಸ್. ವೈ ಸೂಚನೆ

03:38 PM May 16, 2021 | Team Udayavani |

ಬೆಂಗಳೂರು : ಕರಾವಳಿ ಭಾಗದಲ್ಲಿ ಉಂಟಾಗಿರುವ ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಕರಾವಳಿಯಲ್ಲಿ ನಿನ್ನೆಯಿಂದ ತೌಕ್ತೆ ಚಂಡಮಾರುತ ಜನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರೀ ಗಾಳಿ-ಮಳೆಯಿಂದ ಸಮುದ್ರದ  ಅಲೆಗಳು ಪ್ರಕ್ಷುಬ್ಧಗೊಂಡಿದ್ದು ಉಡುಪಿ- ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ತೀರದ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯಾಗಿದೆ.

ಜನ ಜೀವನ ಅಸ್ತವ್ಯಸ್ತವಾಗಿದ್ದು, ಜನರನ್ನು ಸುರಕ್ಷಿತ ವಲಯದತ್ತ ಕರೆದುಕೊಂಡು ಹೋಗುವಲ್ಲಿ ಸಂಬಂಧಪಟ್ಟ ಜಿಲ್ಲಾಡಳಿತ ನಿರತವಾಗಿದೆ.

ಇದನ್ನೂ ಓದಿ : ಕುಂದಾನಗರಿಯಲ್ಲಿ ಜೋರಾದ ಗಾಳಿಯ ಅಬ್ಬರ, ಮಳೆ ಆರ್ಭಟ

ಚಂಡಮಾರುತದ ಪರಿಸ್ಥಿತಿಯನ್ನು ಮನಗಂಡ ಸಿಎಂ, ಕರಾವಳಿ ಭಾಗದ  ಜಿಲ್ಲಾಧಿಕಾರಿಗಳು ಹಾಗು ಸಚಿವರುಗಳಿಗ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಕೋವಿಡ್ ನಡುವೆಯು ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಹಾರ ಹಾಗು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

Advertisement

ಸರ್ಕಾರದಿಂದ ಏನೇ ತುರ್ತು ನೆರವು ಬೇಕಿದರೂ ಸಂಬಂಧಪಟ್ಟ ಸಚಿವರುಗಳಿಗೆ ಅಥವಾ ತಮಗೆ ನೇರವಾಗಿ ಕರೆ ಮಾಡುವಂತೆ ಸೂಚನೆ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next