Advertisement

“ಭಾರತರತ್ನ ಅಭಿಯಾನ’ನಿಲ್ಲಿಸಲು ಟಾಟಾ ಮನವಿ

09:22 AM Feb 07, 2021 | Team Udayavani |

ಮುಂಬಯಿ: ಬಿರುದು, ಪ್ರಶಸ್ತಿಗಳಿಗಾಗಿ ಕ್ಯೂ ನಿಲ್ಲುವ, ಲಾಬಿ ಮಾಡುವವರ ಮಧ್ಯೆ ಖ್ಯಾತ ಉದ್ಯಮಿ ರತನ್‌ ಟಾಟಾ ಆದರ್ಶ ಎತ್ತಿಹಿಡಿದಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿರುವ “ಭಾರತರತ್ನ ಫಾರ್‌ ರತನ್‌ ಟಾಟಾ’ ಹ್ಯಾಶ್‌ ಟ್ಯಾಗ್‌ಗೆ ಪ್ರತಿಕ್ರಿಯಿಸಿರುವ ಅವರು, “ನನಗೆ ಭಾರತರತ್ನ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಅಭಿಯಾನವನ್ನು ಕೂಡಲೇ ನಿಲ್ಲಿಸಬೇಕು’ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಇದು ನನ್ನ ಅದೃಷ್ಟ: “ಗೌರವಗಳ ಬದಲಿಗೆ, ಭಾರತೀಯನಾಗಿರುವುದೇ ನನ್ನ ಪಾಲಿಗೆ ಅದೃಷ್ಟದ ಸಂಗತಿ. ಭಾರತದ ಬೆಳವಣಿಗೆಗೆ, ಸಮೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲು ಶ್ರಮಿಸುವೆನು’ ಎಂದು ಟ್ವೀಟ್‌ ಮಾಡಿದ್ದಾರೆ. ಸ್ಫೂರ್ತಿ ಭಾಷಣಕಾರ ಡಾ| ವಿವೇಕ್‌ ಭಿಂದ್ರಾ, ಈ ಹ್ಯಾಶ್‌ ಟ್ಯಾಗ್‌ ಸೃಷ್ಟಿಸಿದ ಬಳಿಕ ಸಹಸ್ರಾರು ಮಂದಿ “ರತನ್‌ ಟಾಟಾ ಭಾರತರತ್ನಕ್ಕೆ ಅರ್ಹರು’, “ರಿಯಲ್‌ ಹೀರೋ ಆಫ್ ಇಂಡಿಯಾ’ ಎಂದು ಟ್ವೀಟ್‌ ಮಾಡಿದ್ದರು. ಭಾರತದ ಏಳ್ಗೆಗೆ ರತನ್‌ ಟಾಟಾ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next