Advertisement

Target ಇಲಿಯಾಸ್‌ ಕೊಲೆ ಪ್ರಕರಣ: ಐವರು ಆರೋಪಿಗಳು ಖುಲಾಸೆ

12:07 AM Dec 12, 2023 | Team Udayavani |

ಮಂಗಳೂರು: ಕುಖ್ಯಾತ “ಟಾರ್ಗೆಟ್‌ ಗ್ಯಾಂಗ್‌’ನ ನಾಯಕ ನಾಗಿದ್ದ ಟಾರ್ಗೆಟ್‌ ಇಲಿಯಾಸ್‌ನ ಕೊಲೆ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ಮಂಗಳೂರಿನ ನ್ಯಾಯಾಲಯ ದೋಷಮುಕ್ತ ಗೊಳಿಸಿದೆ. ಉಳ್ಳಾಲ ಧರ್ಮನಗರದ ದಾವೂದ್‌, ಮಹಮ್ಮದ್‌ ಶಮೀರ್‌ ಆಲಿಯಾಸ್‌ ಕಡಪರ ಶಮೀರ್‌, ರಿಯಾಜ್‌, ನಮೀರ್‌ ಹಂಝ, ಅಬ್ದುಲ್‌ ಖಾದರ್‌ ಆಲಿಯಾಸ್‌ ಜಬ್ಟಾರ್‌ ದೋಷಮುಕ್ತಗೊಂಡವರು.

Advertisement

ಟಾರ್ಗೆಟ್‌ ಇಲಿಯಾಸ್‌ನನ್ನು 2018ರ ಜ. 13ರಂದು ನಗರದ ಜೆಪ್ಪು ಕುಡಾ³ಡಿ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಚೂರಿ ಇರಿದು ಕೊಲೆ ಮಾಡಲಾಗಿತ್ತು. ಉಳ್ಳಾಲ ದಾವೂದ್‌, ಮಹಮ್ಮದ್‌ ಶಮೀರ್‌ ಆಲಿಯಾಸ್‌ ಕಡಪರ ಶಮೀರ್‌, ಉಮ್ಮರ್‌ ನವಾಫ್, ನೌಶದ್‌, ಮೊಹಮ್ಮದ್‌ ನಾಸಿರ್‌, ರಿಯಾಜ್‌, ನಮೀರ್‌ ಹಂಝ, ಅಸYರ್‌ ಆಲಿ ಆಲಿಯಾಸ್‌ ಅಶ್ರಫ್, ಅಬ್ದುಲ್‌ ಖಾದರ್‌ ಆಲಿಯಾಸ್‌ ಜಬ್ಟಾರ್‌ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್‌. ಅವರು ಐವರು ಆರೋಪಿಗಳು ನಿರ್ದೋಷಿಗಳೆಂದು ಡಿ. 11ರಂದು ತೀರ್ಪು ನೀಡಿದ್ದಾರೆ. ಐವರು ಆರೋಪಿಗಳ ಪರವಾಗಿ ಬಿ. ಜಿನೇಂದ್ರ ಕುಮಾರ್‌, ಅರವಿಂದ ಕುಮಾರ್‌ ಕೆ., ಬಿ. ಅಭಿಜಿತ್‌ ಜೈನ್‌, ವಸುಧಾ ಬಿ. ಮತ್ತು ಅನುಶ್ರೀ ಹೆಗ್ಡೆ ಎಂ. ಅವರು ವಾದಿಸಿದ್ದರು.

ಇತರ ಆರೋಪಿಗಳಾದ ಉಮ್ಮರ್‌ ನವಾಫ್, ನಾಶದ್‌, ಮೊಹಮ್ಮದ್‌ ನಾಸಿರ್‌, ಅಸYರ್‌ ಆಲಿ ಆಲಿಯಾಸ್‌ ಅಶ್ರಫ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next