Advertisement

ಟಂಟಂ, ಲಾರಿ ಡಿಕ್ಕಿ: ಮೂವರ ದುರ್ಮರಣ

09:38 AM Sep 04, 2017 | Team Udayavani |

ರಾಯಚೂರು: ಟಂಟಂ ವಾಹನ ಹಾಗೂ ಲಾರಿ ಮಖಾಮಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕು ಉಮಲೂಟಿ ಬಳಿ ಸೋಮವಾರ ಬೆಳಗ್ಗಿನ ಜಾವ ನನಡೆದಿದೆ.

Advertisement

ಕೊಪ್ಪಳದ ಕುಷ್ಟಗಿ ತಾಲೂಕಿನ ಕನ್ನಾಳ ಗ್ರಾಮದ ಮೌಲಪ್ಪ(40ವರ್ಷ), ಯಮನೂರು(44ವರ್ಷ) ಹಾಗೂ ಗಣಪತಿ ಬಾಳಪ್ಪ ಮೃತಪಟ್ಟ ದುರ್ದೈವಿಗಳು.  ಕನ್ನಾಳದಿಂದ ಸಿಂಧನೂರಿಗೆ ಸಂತಗೆ ಬರುತ್ತಿದ್ದ ಟಂಟಂ ವಾಹನ ಹಾಗೂ ತೌಡು ತುಂಬಿಕೊಂಡು ಕೊಪ್ಪಳದ ಕಡೆಗೆ ಹೋಗುತ್ತಿದ್ದ ಲಾರಿ  ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಟಂಟಂ ವಾಹನದಲ್ಲಿದ್ದ 10 ಕುರಿಗಳು ಸಾವನ್ನಪ್ಪಿದೆ. ಅಲ್ಲದೇ ವಾಹನದಲ್ಲಿದ್ದ ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದಾದ್ದರೆ. ಗಾಯಳುಗಳನ್ನು ತಾವರಗೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವಿಹಾಳ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next