Advertisement

ನೆಲ್ಯಾಡಿ ಬಳಿ ಟ್ಯಾಂಕರ್‌ ಪಲ್ಟಿ:ಗ್ಯಾಸ್‌ ಸೋರಿಕೆ

12:58 PM Mar 03, 2019 | |

ಮಂಗಳೂರು : ಬೆಂಗಳೂರು -ಮಂಗಳೂರು ಹೆದ್ದಾರಿಯ ಪೆರಿಯಶಾಂತಿ ಬಳಿಯ ಲಾವತಡ್ಕದಲ್ಲಿ ಭಾನುವಾರ ಸಂಜೆ  ಗ್ಯಾಸ್‌ ಟ್ಯಾಂಕರ್‌ವೊಂದು ಪಲ್ಟಿಯಾಗಿದ್ದು  ಗ್ಯಾಸ್‌ ಸೋರಿಕೆಯಾಗುತ್ತಿದೆ. 

Advertisement

ಟ್ಯಾಂಕರ್‌ ಪಲ್ಟಿಯಾಗಿ ಗ್ಯಾಸ್‌ ಸೋರಿಕೆ ಹಿನ್ನಲೆಯಲ್ಲಿ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಗುಂಡ್ಯ -ಸುಬ್ರಹ್ಮಣ್ಯ ಮಾರ್ಗವಾಗಿ , ಪೆರಿಯಶಾಂತಿ-ಸುಬ್ರಹ್ಮಣ್ಯ ಬದಲಿ ಮಾರ್ಗವನ್ನು ವಾಹನ ಸವಾರರು ಬಳಸಿಕೊಳ್ಳಬೇಕಾಗಿದೆ. 

ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳು, ಪೊಲೀಸರು ಮತ್ತು ಅಧಿಕಾರಿಗಳು ಆಗಮಿಸಿ ಟ್ಯಾಂಕರ್‌ ತೆರವಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. 

ಟ್ಯಾಂಕರ್‌ ಚಾಲಕನಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು  ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next