Advertisement

ಮಗುಚಿ ಬಿದ್ದ ಸಿಮೆಂಟ್ ಹುಡಿ ತುಂಬಿದ ಟ್ಯಾಂಕರ್: ಮಣ್ಣಿನಡಿ ಹೂತು ಹೋದ ಚಾಲಕ

03:28 PM Aug 03, 2020 | keerthan |

ಉಪ್ಪಿನಂಗಡಿ: ಸಿಮೆಂಟ್ ಹುಡಿ ಹೇರಿಕೊಂಡು ಬರುತ್ತಿದ್ದ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಚರಂಡಿಗೆ ಮಗುಚಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು- ಮಂಗಳೂರು ರಸ್ತೆಯ ನೀರಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

Advertisement

ಸಿಮೆಂಟ್ ಹುಡಿ ಹೇರಿಕೊಂಡು ಬರುತ್ತಿದ್ದ ಟ್ಯಾಂಕರ್ ಮಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಬರುತ್ತಿದ್ದಾಗ ಮಗುಚಿ ಬಿದ್ದಿದೆ. ಬಿದ್ದ ರಭಸಕ್ಕೆ ಚಾಲಕ ಗಣೇಶ್ ಚರಂಡಿಯಲ್ಲಿದ್ದ ಮಣ್ಣಿನೊಳಗೆ ಹೂತು ಹೋಗಿದ್ದ.

ಆದರೆ ವಾಹನ ಮಾತ್ರ ಚಾಲನೆಯಲ್ಲಿದ್ದು, ಚಾಲಕ ಮಣ್ಣಿನಲ್ಲಿ ಸಿಲುಕಿದ್ದ. ಇದನ್ನು ಕಂಡ ಸ್ಥಳೀಯರಾದ ಮನ್ಸೂರ್ ಹಾಗೂ ಮುಫ್ತಾಬ್ ಸೇರಿದಂತೆ ಆಸುಪಾಸಿನ ಮನೆಗಳ ಮಂದಿ ಆತನನ್ನು ಮಣ್ಣಿನಡಿಯಲ್ಲಿ ಹುಡುಕಿ ಹೊರತೆಗೆದರು.

ನಂತರ ಗಾಯಾಳು ಚಾಲಕನನ್ನು ನೆಲ್ಯಾಡಿ ಆಸ್ಪತ್ರೆಗೆ ಕರೆದೊಯ್ದು ನಂತರ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next