Advertisement

ತಮಿಳುನಾಡು ನದಿ ಜೋಡಣೆ ಯೋಜನೆಗೆ ಕಾನೂನು ಮಾನ್ಯತೆ ಇಲ್ಲ : ಡಿಸಿಎಂ ಗೋವಿಂದ ಕಾರಜೋಳ

12:44 AM Mar 19, 2021 | Team Udayavani |

ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರು ಬಳಕೆ ಮಾಡಿಕೊಳ್ಳಲು ತಮಿಳುನಾಡು ಸರಕಾರ ಜಾರಿಗೆ ತರಲು ಮುಂದಾಗಿರುವ ನದಿ ಜೋಡಣೆ ಯೋಜನೆಗೆ ಕಾನೂನು ಮಾನ್ಯತೆ ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸಿಗ ಎಂ. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತ ರಿಸಿದ ಅವರು, ಚುನಾ ವಣೆ ಗಡಿಬಿಡಿ ಯಲ್ಲಿ ತಮಿಳುನಾಡು ಸರಕಾರ ಯೋಜನೆಗೆ ಅಡಿಗಲ್ಲು ಹಾಕಿದೆ. ಇದಕ್ಕೆ ಕಾನೂನು ಮಾನ್ಯತೆ ಇಲ್ಲ. ಅಲ್ಲದೆ ಕೇಂದ್ರದ ಒಪ್ಪಿಗೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಸಚಿವ ಬೊಮ್ಮಾಯಿ ಮಾತನಾಡಿ, ಕಾವೇರಿ ನ್ಯಾಯಮಂಡಳಿ ತೀರ್ಪಿ ನಲ್ಲಿ ಹೆಚ್ಚುವರಿ ನೀರಿನ ಪ್ರಸ್ತಾವ ವಿಲ್ಲ. ಈ ನೀರಿನ ಬಳಕೆ ಮಾಡಿ ಕೊಳ್ಳ ಬೇಕಾ ದರೆ ಕಾವೇರಿ ಕೊಳ್ಳ ವ್ಯಾಪ್ತಿಯ ಎಲ್ಲ ರಾಜ್ಯಗಳ ಅನುಮತಿ ಬೇಕು. ತ. ನಾಡಿಗೆ ತಡೆ ನೀಡಬೇಕು ಎಂದು ಕೇಂದ್ರ ಮತ್ತು ಕೇಂದ್ರ ಜಲ ಆಯೋಗಕ್ಕೆ ಮನವಿ ಮಾಡಿ ದ್ದೇವೆ. ಸು. ಕೋರ್ಟ್‌ ನಲ್ಲಿ ದಾವೆ ಹೂಡ ಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next