Advertisement

Tamil Nadu ಸರಕಾರ ಹೇಳಿದಂತೆ ಕ್ಷಮೆ ಕೇಳಲ್ಲ: ಕೇಂದ್ರ ಸಚಿವೆ ಶೋಭಾ

02:10 AM Aug 18, 2024 | Team Udayavani |

ಚೆನ್ನೈ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತ.ನಾಡಿನ ವಿರುದ್ಧ ತಾವು ನೀಡಿದ್ದ ಹೇಳಿಕೆ ಕುರಿತು ಕ್ಷಮೆಯಾಚಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮಯ ಬೇಕೆಂದು ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಎಫ್ಐಆರ್‌ ಹಿಂಪಡೆಯಲು ಸಚಿವೆ ಪತ್ರಿಕಾಗೋಷ್ಠಿಯಲ್ಲಿ ನಾವು ನೀಡುವ ಕ್ಷಮಾಪಣ ಪತ್ರ ಓದಬೇಕೆಂದು ತಮಿಳುನಾಡು ಸರಕಾರ ಹೇಳಿತ್ತು. ಆದರೆ, ಶೋಭಾ ಪರ ವಕೀಲರು ಸಚಿವೆ ಈಗಾಗಲೇ ಟ್ವಿಟರ್‌ನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದರು. ಆದಾಗ್ಯೂ ಕೋರ್ಟ್‌ ಹೇಳಿಕೆ ನೀಡಿದ ರೀತಿಯಲ್ಲೇ ಕ್ಷಮೆ ಕೇಳಬೇಕೆಂದು ಹೇಳಿ, ಆ.23ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next