Advertisement

ತಮಿಳುನಾಡು ಬಂದ್‌: KSRTC ಗೆ ಕಲ್ಲು,ಚಾಲಕ,ಕಂಡಕ್ಟರ್‌ಗೆ ಥಳಿತ!

09:20 AM Apr 11, 2018 | Team Udayavani |

ಚೆನ್ನೈ: ಕಾವೇರಿ  ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪಟ್ಟು ಹಿಡಿದಿರುವ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬುಧವಾರ  ಬಂದ್‌ ಆಚರಿಸುತ್ತಿವೆ. 

Advertisement

ಕಡಲೂರಿನ ವಿಳ್ಳುಪುರದಲ್ಲಿ ಮಂಗಳವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಚಾಲಕ ಮತ್ತು ನಿರ್ವಾಹಕನ ಮೇಲೂ ಹಲ್ಲೆ ನಡೆಸಿ ತಮಿಳುನಾಡಿನ ಪರ ಘೋಷಣೆಗಳನ್ನು ಕೂಗಿಸಲಾಗಿದೆ. 

ಬಸ್‌ ಅಡ್ಡಗಟ್ಟಿದ 40 ಕ್ಕೂ ಹೆಚ್ಚು ಕಿಡಿ ಗೇಡಿಗಳು ದಾಂಧಲೆ ನಡೆಸಿದ್ದು , ಚಾಲಕ ಬಸವಾರಜ್‌ ಮತ್ತುನಿರ್ವಾಹಕ ಗುರು ಸಂಗಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. 

ಈ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದು ಚಾಲಕ ಮತ್ತು ನಿರ್ವಾಹಕನಿಗೆ ರಕ್ಷಣೆ ನೀಡಿದ್ದಾರೆ.

ಬಂದ್‌ ಹಿನ್ನಲೆಯಲ್ಲಿ ಕರ್ನಾಟಕದಿಂದ ಯಾವುದೇ ಸರ್ಕಾರಿ ಬಸ್‌ಗಳು ತಮಿಳುನಾಡಿನತ್ತ ಸಂಚರಿಸುತ್ತಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next