Advertisement

23ಕ್ಕೆ ತಾಲೂಕು ಸಾಹಿತ್ಯ ಸಮ್ಮೇಳನ

03:30 PM Nov 08, 2019 | Team Udayavani |

ಬಾಗೇಪಲ್ಲಿ: ತಾಲೂಕು ಕಸಾಪ ವತಿಯಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ.23 ರಂದು ಪಟ್ಟಣದ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ ನಡೆಸಲು ಸಾಹಿತ್ಯ ಪರಿಷತ್‌ನ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾ ಆವರಣದ ಕನ್ನಡ ಭವನದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎ.ಜಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ತುರ್ತುಸಭೆ  ನಡೆಯಿತು.

Advertisement

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್‌ ಅಹಮದ್‌ ಮಾತನಾಡಿ, ಆಂಧ್ರದ ಗಡಿಯ ತಾಲೂಕಿನಲ್ಲಿ ಕನ್ನಡ ಭಾಷೆ, ನಾಡು, ಸಾಹಿತ್ಯ,  ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕನ್ನಡ ಸಾಹಿತ್ಯ ಪರಿಚಯಿಸುವ ಕೆಲಸ ಆಗಬೇಕು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಸಾಹಿತ್ಯ, ಕಲೆ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕೆಂದರು.

ಸಾಹಿತ್ಯ ಪರಿಷತ್‌ನ ತಾಲೂಕು ಪ್ರ. ಕಾರ್ಯದರ್ಶಿ ಡಿ.ಎನ್‌.ಕೃಷ್ಣಾರೆಡ್ಡಿ, ತಾಲೂಕು ಕಸಾಪ ಅಧ್ಯಕ್ಷ ಎ.ಜಿ. ಸುಧಾಕರ್‌ ಮಾತನಾಡಿದರು. ಸಭೆಯಲ್ಲಿ ನ್ಯಾಷನಲ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮಯ್ಯ, ಜಿಲ್ಲಾ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕೃತ ವಲೀಭಾಷ, ತಾಲೂಕು ಕಸಾಪ ಸಂಚಾಲಕ ಶ್ರೀನಿವಾಸ್‌, ಕಾರ್ಯದರ್ಶಿ ಡಾ.ಚಿನ್ನ ಕೈವಾರಮಯ್ಯ, ಮಾಜಿ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೈಯದ್‌ ಸಿದ್ದೀಕ್‌, ಪತ್ರಿಕಾ ಕಾರ್ಯದರ್ಶಿ, ಕನ್ನಡ ಕಲಾ ಸಂಘದ ಅಧ್ಯಕ್ಷ ಪಿ.ಎಸ್‌. ರಾಜೇಶ್‌, ಸಾಹಿತಿಗಳಾದ ಶ್ರೀನಿವಾಸ ತಂತ್ರಿ, ಚಂದ್ರಶೇಖರ್‌, ಉಪನ್ಯಾಸಕ ಉಮೇಶ್‌ ಭಾವಿಕಟ್ಟಿ, ಮುಖ್ಯಶಿಕ್ಷಕ ಮಂಜುನಾಥ್‌, ಮಹಿಳಾ ಪ್ರತಿನಿಧಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next