Advertisement

ಔರಾದ್‌ಕರ್‌ ಸಮಿತಿ ವರದಿ ಕುರಿತು ಸಿಎಂ ಜತೆ ಚರ್ಚೆ: ಎಂ.ಬಿ.ಪಾಟೀಲ್‌

11:14 PM May 31, 2019 | Lakshmi GovindaRaj |

ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆ ಕುರಿತ ಔರಾದ್‌ಕರ್‌ ವರದಿ ಬಗ್ಗೆ ಮುಖ್ಯಮಂತ್ರಿಯವರಿಗೆ ಸದ್ಯದಲ್ಲೇ ಮಾಹಿತಿ ನೀಡಲಿದ್ದೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಪೊಲೀಸರ ವೇತನದಲ್ಲಿ ಆಗಿರುವ ತಾರತಮ್ಯ ನಿವಾರಿಸಲಾಗುವುದು. ಔರಾದ್‌ಕರ್‌ ವರದಿ ಬಗ್ಗೆ ನಾನು ಕನ್ವಿನ್ಸ್‌ ಆಗಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲಿದ್ದೇನೆ ಎಂದು ಹೇಳಿದರು.

ಪೊಲೀಸರ ಸಂಬಳ ನನ್ನ ಅವಧಿಯಲ್ಲಿ ಹೆಚ್ಚಾಗಲಿ ಎಂಬ ಆಸೆ ನನಗೂ ಇದೆ. ಹೀಗಾಗಿ, ನಾನು ಆ ಬಗ್ಗೆ ವಿಶೇಷ ಕಾಳಜಿ ವಹಿಸಲಿದ್ದೇನೆ. ಹಣಕಾಸು ಇಲಾಖೆ ಅಡ್ಡಿ ಮಾಡುತ್ತದೆ. ಆದರೂ ಹಣಕಾಸು ಸಚಿವರು ಮುಖ್ಯಮಂತ್ರಿಯವರೇ ಆಗಿರುವುದರಿಂದ ಅವರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಗೃಹ ಸಚಿವರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಮಾಜಿ ಸಚಿವ ಸುರೇಶ್‌ಕುಮಾರ್‌ ಅವರ ಬಗ್ಗೆ ನನಗೆ ಗೌರವವಿದೆ. ನಾಳೆ ಸುರೇಶ್‌ಕುಮಾರ್‌, ಶೋಭಾ ಕರಂದ್ಲಾಜೆಯವರ ಹೆಸರಿನಲ್ಲೇ ಈ ರೀತಿಯ ನಕಲಿ ಲೆಟರ್‌ ಹೆಡ್‌ ಮಾಡಿದರೆ ಸುಮ್ಮನಿರುತ್ತಾರಾ? ಆದರೆ, ಆ ವಿಚಾರದಲ್ಲಿ ಇಬ್ಬರೂ ಬೆಂಬಲ ನೀಡಿದ್ದು ವಿಪರ್ಯಾಸ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿಯವರು ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಆಪರೇಷನ್‌ ಕಮಲ ಆಪರೇಷನ್‌ ಕಮಲವಾಗಿಯೇ ಉಳಿಯಲಿದೆ. ಬಿಜೆಪಿಯು ಗೌರವಯುತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದರೆ ಒಳ್ಳೆಯದು
-ಎಂ.ಬಿ.ಪಾಟೀಲ್‌, ಗೃಹ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next