Advertisement

ರಾಜ್ಯದಲ್ಲಿ ತಾಲಿಬಾನ್ ಆಡಳಿತ: ಹಿಂದೂ ವಿರೋಧಿ ಸರ್ಕಾರಕ್ಕೆ ಹಿಂದೂ ಮುಖಂಡನಿಂದ ಧಿಕ್ಕಾರ

09:44 AM Sep 14, 2024 | Team Udayavani |

ಮಹಾಲಿಂಗಪುರ : ಪ್ರಗತಿ ಪರರು, ಜಾತ್ಯಾತೀತರು, ವಿಚಾರವಾದಿಗಳು ಎಲ್ಲಿದ್ದೀರಿ ? ರಾಜ್ಯದಲ್ಲಿ ನಡೆಯುತ್ತಿರುವ ತಾಲಿಬಾನ್ ಆಡಳಿತ ನಿಮಗೆ ಕಾಣಿಸುತ್ತಿಲ್ಲವಾ.? ಎಂದು ಪಟ್ಟಣದ ಹಿಂದೂ ಮುಖಂಡ ರವಿ ಕಾಶಿನಾಥ ಜವಳಗಿ ಅವರು ಮಂಡ್ಯ ಜಿಲ್ಲೆ ನಾಗಮಂಗಲ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಉದಯವಾಣಿಯೊಂದಿಗೆ ಮಾತನಾಡಿದ ಅವರು ಕೊಲೆ ಮಾಡಿದವರನ್ನು, ಕಳ್ಳರನ್ನು, ಅತ್ಯಾಚಾರಿಗಳನ್ನು ಕೂರಿಸಿಕೊಂಡು ಹೋಗುವ ಪೊಲೀಸ್ ಗಾಡಿಯಲ್ಲಿ ನಾವು ಪೂಜಿಸುವ ಗಣಪತಿ ಮೂರ್ತಿಯನ್ನು ಕೂರಿಸಿಕೊಂಡು ಹೋಗಿದ್ದು ಖೇದಕರ ಸಂಗತಿ. ರಾಜ್ಯಕ್ಕೆ ಅಪಶಕುನದ ಸಂಗತಿಯಾಗಿದೆ.

ಹಿಂದು ವಿರೋಧಿ ಸರಕಾರಕ್ಕೆ ದಿಕ್ಕಾರವಿರಲಿ. ಸರ್ಕಾರಕ್ಕೆ ಗಣೇಶನ ಶಾಪ ತಟ್ಟಲಿದೆ. ಬಹುಸಂಖ್ಯಾತ ಹಿಂದು ರಾಷ್ಟ್ರ ದಲ್ಲಿ ಗಣೇಶನಿಗೆ ಈ ಪರಿಸ್ಥಿತಿ ಎದುರಾಗಿದೆ. ಆದರೂ ಕೂಡ ಹಿಂದುಗಳು ಕೇವಲ ಬಿಟ್ಟಿ ಭಾಗ್ಯಗಳಿಗೆ ಜೋತು ಬಿದ್ದು ತಮ್ಮತನ ಮರೆತಿದ್ದಾರೆ ಎಂದು ವಿಷಾದ ವ್ಯಕ್ತಿ ಪಡಿಸಿದ ಅವರು ಘಟನೆಗೆ ಕಾರಣ ಆದವರನ್ನು ಬಂಧಿಸುವುದನ್ನು ಬಿಟ್ಟು, ಗಣಪತಿ ಪ್ರತಿಷ್ಟಾಪಿಸಿದವರನ್ನೆ ಬಂಧಿಸಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ನಾಗಮಂಗಲ ಘಟನೆಯ ನಿಜವಾದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಇದನ್ನೂ ಓದಿ: Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next