Advertisement

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

05:49 PM Apr 06, 2022 | Team Udayavani |

ಚಿಕ್ಕಮಗಳೂರು: ರಾಜಸ್ಥಾನದ ದೌಸಾ ಎಂಬಲ್ಲಿ ರೋಗಿಯೊಬ್ಬರ ಸಾವಿನ ಕಾರಣದಿಂದಾಗಿ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದರಿಂದ ಮನನೊಂದು ವೈದ್ಯೆ ಅರ್ಚನಾ ಶರ್ಮ (42) ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ ವತಿಯಿಂದ ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ| ಎಚ್‌.ಎನ್‌.ಸ್ವಾಮಿ ಮಾತನಾಡಿ, ದೇಶದ ಯಾವುದೇ ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ನಡೆದಾಗ ಏಕಾಏಕಿ ವೈದ್ಯರ ಮೇಲೆ ಪೊಲೀಸರು ಪ್ರಕರಣ ದಾಖಲಿಸುವ ಮುನ್ನಾ ಉನ್ನತ ಮಟ್ಟದ ವೈದ್ಯರ ಸಮಿತಿ ರಚಿಸಿ ಅವರಿಂದ ಪರಿಶೀಲನೆ ನಡೆಸಿ ಬಳಿಕ ತಪ್ಪಿತಸ್ಥರಾಗಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ವೈದ್ಯ ಸಮೂಹ ಕರ್ತವ್ಯ ನಿರ್ವಹಿಸುವುದು ಕಠಿಣವಾಗಲಿದೆ ಎಂದು ತಿಳಿಸಿದರು.

ಸಿಎಸ್‌ಒಜಿ ಪ್ರೆಸಿಡೆಂಟ್‌ ಡಾ|ಜ್ಯೋತಿಕೃಷ್ಣೇಗೌಡ ಮಾತ ನಾಡಿದರು. ಘಟಕದ ಕಾರ್ಯದರ್ಶಿ ಡಾ| ಯೋಗೇಶ್‌, ಡಾ| ಮೀರಾಕುಚೇಂದ್ರ , ಡಾ| ಸಂತೋಷ್‌, ಶುಭಾವಿಜಯ್‌, ಶ್ರೀಧರ್‌, ಪ್ಯಾಟ್ರಿಕ್‌, ಡಾ.ಮೋಹನ್‌, ಪ್ರಶಸ್ತಿ, ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next