Advertisement

ಎನ್‌ಸಿ, ಪಿಡಿಪಿ ದೇಶದ್ರೋಹದ ಪ್ರಚಾರಾಭಿಯಾನ: ಇಸಿಐ ಗೆ ಪನೂನ್‌ ಕಾಶ್ಮೀರ್‌ ದೂರು

09:04 AM Apr 09, 2019 | Team Udayavani |

ಜಮ್ಮು : ಕಾಶ್ಮೀರ ಕಣಿವೆಯಲ್ಲಿ ದೇಶದ್ರೋಹದ ಮತ್ತು ಪ್ರತ್ಯೇಕತಾ ಪ್ರಚಾರಾಭಿಯಾನ ನಡೆಸುತ್ತಿರುವ ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿ ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದು ಕಾಶ್ಮೀರಿ ಪಂಡಿತ ವಲಸಿಗರನ್ನು ಪ್ರತಿನಿಧಿಸುತ್ತಿರುವ ‘ಪನೂನ್‌ ಕಾಶ್ಮೀರ್‌’ ಎಂಬ ಸಂಘಟನೆಯು ಚುನಾವಣಾ ಆಯೋಗವನ್ನು ಮನವಿ ಮೂಲಕ ಆಗ್ರಹಿಸಿದೆ.

Advertisement

ಭಾರತಕ್ಕೆ ಜಮ್ಮು ಕಾಶ್ಮೀರ ಸೇರ್ಪಡೆಯು ಶರತ್ತು ಬದ್ಧವಾಗಿದ್ದು ಸಂವಿಧಾನದ 370ನೇ ವಿಧಿಯನ್ನು ಕಿತ್ತು ಹಾಕಿದಲ್ಲಿ ರಾಜ್ಯವು ಭಾರತದಿಂದ ಪ್ರತ್ಯೇಕವಾಗುವುದು ಖಚಿತ ಎಂಬ ರೀತಿಯ ಚುನಾವಣಾ ಪ್ರಚಾರ ನಡೆಸಲಾಗುತ್ತಿರುವುದು ದೇಶದ್ರೋಹಕ್ಕೆ ಸಮವಾಗಿದೆ ಎಂದು ಕಾಶ್ಮೀರಿ ಪಂಡಿತ ಸಂಘಟನೆಯು ಚುನಾವಣಾ ಆಯೋಗಕ್ಕೆ ಹೇಳಿದೆ.

ಎನ್‌ಸಿ ಮತ್ತು ಪಿಡಿಪಿ ಪಾಕಿಸ್ಥಾನದ ಹಿತಾಸಕ್ತಿಗೆ ಅನುಗುಣವಾಗಿ ಪ್ರಚಾರಾಭಿಯಾನ ಕೈಗೊಳ್ಳುತ್ತಿದ್ದು ಇದು ದೇಶದ್ರೋಹವೇ ಆಗಿದೆ ಎಂದು ಪನೂನ್‌ ಕಾಶ್ಮೀರ್‌ ಸಂಘಟನೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next