Advertisement

ಕ್ಷೇತ್ರದತ್ತ ಗಮನವಿರಲಿ: ಕಾರ್ತಿಗೆ ಕೋರ್ಟ್‌

12:28 AM May 30, 2019 | mahesh |

ಹೊಸದಿಲ್ಲಿ: ವಿದೇಶ ಪ್ರವಾಸಕ್ಕೆ ಅನುಮತಿ ನೀಡುವಾಗ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸಿದ್ದ 10 ಕೋಟಿ ರೂ.ಗಳನ್ನು ವಾಪಸ್‌ ನೀಡುವಂತೆ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಿರಸ್ಕರಿಸಿದೆ. ಜೊತೆಗೆ, “ನೀವು ನಿಮ್ಮ ಲೋಕಸಭಾ ಕ್ಷೇತ್ರದ ಕಡೆಗೆ ಗಮನ ವಹಿಸಿ’ ಎಂಬ ಸಲಹೆಯನ್ನೂ ನ್ಯಾಯಪೀಠ ನೀಡಿದೆ. ಹಣಕಾಸು ಅಕ್ರಮ ಪ್ರಕರಣ ಸಂಬಂಧ ಕಾರ್ತಿ ವಿಚಾರಣೆ ಎದುರಿಸುತ್ತಿದ್ದಾರೆ. ವಿದೇಶ ಪ್ರವಾಸಕ್ಕೆ ಅನು ಮತಿ ಕೋರಿ ಈ ಹಿಂದೆ ಕಾರ್ತಿ ಅರ್ಜಿ ಸಲ್ಲಿಸಿದ್ದರು. ಅನುಮತಿ ನೀಡಿದ್ದ ಕೋಟ್‌ 10 ಕೋಟಿ ರೂ.ಗಳನ್ನು ಠೇವಣಿ ಇಡುವಂತೆ ಸೂಚಿಸಿತ್ತು. ಅದರಂತೆ, ಠೇವಣಿ ಇರಿಸಿದ್ದರು. ಆದರೆ, ತಾವು ಆ 10 ಕೋಟಿ ರೂ.ಗಳನ್ನು ಬೇರೊಬ್ಬರಿಂದ ಸಾಲವಾಗಿ ಪಡೆದಿದ್ದು, ಅದನ್ನು ಮರುಪಾವತಿಸಬೇಕಾಗಿದೆ. ಅದನ್ನು ವಾಪಸ್‌ ನೀಡಿ ಎಂದು ಕಾರ್ತಿ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next