Advertisement

ಕಲುಷಿತ ನೀರು ಪೂರೈಸಿದರೆ ಕ್ರಮ ಕೈಗೊಳ್ಳಿ

09:23 AM Jun 28, 2019 | Suhan S |

ಕುಣಿಗಲ್: ಕಲುಷಿತ ನೀರು ಪೂರೈಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ಗೆ ಶಾಸಕ ಡಾ.ಎಚ್.ಡಿ.ರಂಗನಾಥ್‌ ಸೂಚಿಸಿದರು. ಅಮೃತೂರು ಸರ್ಕಾರಿ ಶಾಲಾ ಆವರಣದಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಅಮೃತೂರು ಗ್ರಾಮದ ಎರಡು, ಮೂರು ಹಾಗೂ ನಾಲ್ಕನೇ ಬ್ಲಾಕ್‌ ಕೆಲ ಬಡಾವಣೆಗಳಲ್ಲಿ ಕಳೆದ ಆರು ತಿಂಗಳಿನಿಂದ ಟ್ಯಾಂಕರ್‌ ನೀರು ಸರಬರಾಜು ಮಾಡ ಲಾಗುತ್ತಿದೆ. ನೀರು ಯೋಗ್ಯವಾಗಿಲ್ಲ ಎಂದು ಶಾಸಕರಿಗೆ ದೂರು ಹೇಳಿದರು, ಕೆಂಡಾಮಂಡಲರಾದ ಶಾಸಕ, ಶಾಸಕರ ಅನುದಾನದಲ್ಲಿ ಹೊಸದಾಗಿ ಐದು ಕೊಳವೆ ಬಾವಿ ಕೊರೆಸಲಾಗಿದೆ ಆದರೂ ಶುದ್ಧ ನೀರು ಏಕೆ ಪೂರೈಸುತ್ತಿಲ್ಲ ಎಂದು ಪಿಡಿಒ ಲತಾ ಅವರನ್ನು ತರಾಟೆ ತೆಗೆದುಕೊಂಡರು. 5 ಹೊಸ ಕೊಳವೆ ಬಾವಿಗಳ ಪೈಕಿ ಎರಡು ವಿಫ‌ಲ ವಾಗಿದೆ. ಒಂದು ರೀಬೋರ್‌ ಮಾಡ ಲಾಗಿದೆ. ಉಳಿದ ಎರಡು ಕೊಳವೆ ಬಾವಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ. ಹಾಗಾಗಿ ಟ್ಯಾಕರ್‌ ನೀರು ಸರಬರಾಜು ಮಾಡಲಾಗುತ್ತದೆ ಎಂದು ಪಿಡಿಒ ತಿಳಿಸಿದರು. ನೀರಿನ ಗುಣಮಟ್ಟ ಪರಿಶೀಲಿಸಿದ್ದೀರ ಎಂದು ಕೇಳಿದ ಪ್ರಶ್ನೆಗೆ ಪಿಡಿಒ ನಿರುತ್ತರರಾದರು.

ಕೆರೆಗೆ ನೀರು ತುಂಬಿಸಿ: ಮಾರ್ಕೋನಹಳ್ಳಿ ಜಲಾಶಯ ದಿಂದ ಅಮೃತೂರು ಭಾಗದ ಸಾಲು ಕೆರೆಗಳಿಗೆ ನೀರು ಹರಿಸಿದರೆ, ಅಂರ್ತಜಲ ಮಟ್ಟ ಸುಧಾರಣೆಯಾಗಿ ಕೊಳವೆಬಾವಿಗಳಿಗೆ ನೀರು ಬರುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು. ಗ್ರಾಮಸ್ಥರ ಸಲಹೆ ಸ್ವಾಗತಿಸಿದ ಶಾಸಕರು ಈ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದರು.

ಅಕ್ಕಿ ತೂಕದಲ್ಲಿ ಮೋಸ: ನ್ಯಾಯ ಬೆಲೆ ಅಂಗಡಿಯವರು ಅಕ್ಕಿ ಕಡಿಮೆ ಬರುತ್ತಿದೆ ಎಂದು ಆರು ಕೆ.ಜಿ ಮಾತ್ರ ಕೊಡುತ್ತಿದ್ದಾರೆ. ಅಲ್ಲದೆ ಕೆ.ಜಿ ತೊಗರಿಬೆಳೆಗೆ 38 ರೂ.ಇದ್ದರೆ 50 ರೂ ತೆಗೆದುಕೊಳ್ಳುತ್ತಿದ್ದಾರೆ ಎಂದು ನಾಗರಿಕರು ದೂರಿದರು.

ಅಕ್ರಮ ಎಸಗುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಹಾರ ಇನ್ಸ್‌ಸ್ಪೆಕ್ಟರ್‌ಗೆ ಸೂಚಿಸಿದರು. ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಮಾತನಾಡಿ, ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಜು. 1ರಿಂದ ಕಂದಾಯ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಶಾಸಕರು ತಿಳಿಸಿದರು.

Advertisement

ತರಾಟೆ: ಎಚ್ವಿಡಿಎಸ್‌ ಯೋಜನಡಿಯಲ್ಲಿ ರೈತರ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಪರಿವರ್ತಕ ಅಳವಡಿಸಿಲು 500 ಬಾರಿ ಕರೆ ಮಾಡಿದ್ದೇನೆ ಎಂದು ಬೆಸ್ಕಾಂ ಎಸ್‌ಒ ನವೀನ್‌ಕುಮಾರ್‌ ಅವರನ್ನು ಶಾಸಕರು ತರಾಟೆ ತೆಗೆದು ಕೊಂಡರು. ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಂಡಿರುವ ರೈತರು ಅನ್ಯಾಯವಾಗಿ ದಂಡ ಕಟ್ಟಬೇಕಾಗುತ್ತದೆ. ಕೂಡಲೇ ಸಕ್ರಮ ಮಾಡಿಕೊಡಿ ಎಂದು ಸಲಹೆ ನೀಡಿದರು. ಇಒ ಶಿವರಾಜಯ್ಯ, ಗ್ರಾಪಂ ಅಧ್ಯಕ್ಷ ವೆಂಕಟರಾಮು, ಉಪಾಧ್ಯಕ್ಷೆ ಸೈದಾಬೇಗಂ, ಸದಸ್ಯರಾದ ಮರಿಯಪ್ಪ, ಪಾರ್ವತಮ್ಮ, ಭರತ್‌, ಸೋಮಶೇಖರ್‌, ತಾಲೂಕು ಪಂಚಾಯತಿ ಸದಸ್ಯೆ ನಾಗಮ್ಮ, ಮುಖಂಡ ರಾದ ಹರೀಶ್‌ಗೌಡ, ದಿವಾಕರ್‌ಗೌಡ, ಗೂಳಿಗೌಡ, ಬೋರೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next