Advertisement

ಎಷ್ಟು ದಿನ “ಒನ್‌ ಮ್ಯಾನ್‌ ಶೋ’ನೋಡೋಣ

11:17 PM Aug 07, 2019 | Team Udayavani |

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರು ಎಷ್ಟು ದಿನ “ಒನ್‌ ಮ್ಯಾನ್‌ ಶೋ’ ನಡೆಸುತ್ತಾರೋ ನಾವೂ ನೋಡ್ತೀವಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ನಾವು ಯಡಿಯೂರಪ್ಪನವರಂತೆ ಆತುರ ಪಡಲ್ಲ. ಕಾದು ನೋಡುತ್ತೇವೆ ಎಂದರು. ಯಡಿಯೂರಪ್ಪ ಅವರು ಏನು ಕೇಳಿದರೂ ದೆಹಲಿಯನ್ನು ತೋರಿಸುತ್ತಾರೆ.

Advertisement

ಅವರು ವಿರೋಧ ಪಕ್ಷದಲ್ಲಿದ್ದಾಗ ಕುಮಾರಸ್ವಾಮಿ ಅವರ ಸರ್ಕಾರ ರಚನೆ ಮಾಡುವ ಮುನ್ನವೇ ರೈತರ ಕಾಳಜಿ, ಸಾಲಮನ್ನಾ ಅಂತ ಕೂಗಾಡುತ್ತಿದ್ದರು. ಅವರಂತೆ ನಾವು ಆತುರದಲ್ಲಿ ಹೇಳಿಕೆ ನೀಡುವುದಿಲ್ಲ ಎಂದರು. ಸರ್ಕಾರ ರಚನೆಯಾಗಿ ಹತ್ತು ದಿನ ಆದರೂ ಯಡಿಯೂರಪ್ಪ “ಒನ್‌ ಮ್ಯಾನ್‌ ಶೋ’ ನಡೆಸುತ್ತಿದ್ದಾರೆ. ಅವರಿಗೆ ಏನು ಕಷ್ಟ ಇದೆಯೋ ನೋಡೋಣ. ಬೇಕಾದರೆ 100 ದಿನ ಸಮಯ ತೆಗೆದುಕೊಳ್ಳಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next