Advertisement

T20 ವಿಶ್ವಕಪ್‌: ಜಡೇಜ,ಕುಲದೀಪ್‌ ಖಚಿತ?

11:46 PM Apr 21, 2024 | Team Udayavani |

ಹೊಸದಿಲ್ಲಿ: ಮೇ 1ರೊಳಗೆ ಭಾರತ ಟಿ20 ವಿಶ್ವಕಪ್‌ ತಂಡ ವನ್ನು ಅಂತಿಮಗೊಳಿಸುವ ಕಸರತ್ತಿ ನಲ್ಲಿರುವ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ)ಇದೆ. ಸ್ಪಿನ್ನರ್‌ಗಳ ವಿಚಾರ ದಲ್ಲಿ ಬಿಸಿಸಿಐ ಕೆಲವು ಆಟಗಾರರ ಆಯ್ಕೆ ಕುರಿತು ಸ್ಪಷ್ಟತೆ ಹೊಂದಿದೆ ಎಂದು ಮೂಲಗಳು ಹೇಳಿವೆ. ಸದ್ಯದ ಪ್ರಕಾರ ಪರಿಣಾಮಕಾರಿಯಾಗಿ ಸ್ಪಿನ್‌ ಬೌಲಿಂಗ್‌ ಮಾಡಬಲ್ಲ, ಬ್ಯಾಟಿಂಗ್‌ನಲ್ಲೂ ಅಮೋಘ ಪ್ರದರ್ಶನ ತೋರುತ್ತಿರುವ ರವೀಂದ್ರ ಜಡೇಜ ಸಹಜವಾಗಿ ಆಯ್ಕೆಯಾಗುತ್ತಾರೆ.

Advertisement

ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ಪರ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕುಲದೀಪ್‌ ಯಾದವ್‌ ಕೂಡ ಸ್ಥಾನ ಪಡೆಯುವುದು ಖಾತ್ರಿ. ಈ ಬಾರಿ ಪರ್ಪಲ್‌ ಕ್ಯಾಪ್‌ ಪಡೆಯುವ ಪೈಪೋಟಿಯಲ್ಲಿರುವ ಯಜುವೇಂದ್ರ ಚಹಲ್‌ಗೆ ಮಾತ್ರ, ಸ್ಥಾನ ಸಿಗುವ ಬಗ್ಗೆ ಖಾತ್ರಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next