Advertisement

ಮುನಿರತ್ನ ಹೆಣ್ಣು ಮಗಳ ಸೀರೆ ಎಳೆದ ದುಶ್ಯಾಸನ ಇದ್ದಂತೆ: ಟಿ.ಎ ಶರವಣ ವಾಗ್ದಾಳಿ

04:44 PM Oct 18, 2020 | keerthan |

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, ‘ಮನಿ’ರತ್ನ. ಅವರು ಹೆಣ್ಣು ಮಗಳ ಸೀರೆ ಎಳೆದ ದುಶ್ಯಾಸನ ಇದ್ದಂತೆ. ದುಶ್ಯಾಸನನಂತೆ ಕಾರ್ಪೊರೇಟರ್ ಸೀರೆ ಎಳೆದಿದ್ದರು. ಇಂತವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇವತ್ತು ಮುನಿರತ್ನ ಧರ್ಮರಾಯನಂತೆ ಕಾಣುತ್ತಾರಾ ಎಂದು ಮಾಜಿ ಪರಿಷತ್ ಸದಸ್ಯ ಟಿ.ಎ ಶರವಣ ವಾಗ್ದಾಳಿ ನಡೆಸಿದರು.

Advertisement

ಲಗ್ಗೆರೆಯಲ್ಲಿ ನಡೆಯುತ್ತಿರುವ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜೆಡಿಎಸ್‌ ಎಲ್ಲಿದೆ ಎನ್ನುತ್ತಾರೆ. ಜೆಡಿಎಸ್ ಎಲ್ಲಿದೆ ಎಂದು ಅವರಿಗೆ ಚಾಮುಂಡೇಶ್ವರಿಯಲ್ಲೇ ತೋರಿಸಿದ್ದೇವೆ. ಎಷ್ಟು ಬಾರಿ ನಿಮಗೆ ಜೆಡಿಎಸ್ ಎಲ್ಲಿದೆ ಎಂದು ತೋರಿಸಬೇಕು ಎಂದು ಹಾಸ್ಯ ಮಾಡಿದರು.

ಕುಮಾರಸ್ವಾಮಿ ಬಗ್ಗೆ ಸಿನಿಮಾ ಶೈಲಿಯಲ್ಲಿ ಡೈಲಾಗ್ ಹೊಡೆದ ಟಿ.ಎ ಶರವಣ, ಸಿಂಹ ಬಂದ್ರೆ ಘರ್ಜನೆ ಇರುತ್ತದೆ, ಹುಲಿ ಬಂದ್ರೆ ವೇಗ ಇರುತ್ತದೆ, ಚಿರತೆ‌ ಬಂದ್ರೆ ಗಾಂಭೀರ್ಯ ಇರುತ್ತದೆ. ಕುಮಾರಣ್ಣ ಬಂದ್ರೆ ಎಲ್ಲವೂ ಇರುತ್ತದೆ ಎಂದರು.

ಇದನ್ನೂ ಓದಿ:ರಂಗೇರಿದ ರಾಜರಾಜೇಶ್ವರಿ ಚುನಾವಣಾ ಕಣ: ಮಾತಿನ ಸಮರದ ನಡುವೆ ಪಕ್ಷಾಂತರ ಪ್ರಹಸನ

ಈಗ ಮತದಾರರು ಮಲಗಬಾರದು. ಮಲಗಿದರೆ ನಮಗೆ ಲಾಸ್. ನೀವು ಎದ್ದರೆ ಅಭ್ಯರ್ಥಿ ಕೃಷ್ಣಮೂರ್ತಿ ಪಾಸ್, ಆಗಲೇ ಕುಮಾರಸ್ವಾಮಿ ಕರ್ನಾಟಕಕ್ಕೆ ಬಾಸ್ ಎಂದರು ಹೇಳಿದ ಶರವಣ, ಬಂಡೆ ಎಲ್ಲೋ ನಿಂತುಕೊಂಡು ಏನೋ ಹೇಳಿಕೆ ಕೊಡುತ್ತದೆ. ಆದರೆ ಜೆಡಿಎಸ್ ಅನ್ನು ಯಾರೂ ಮುಗಿಸಲು ಸಾಧ್ಯವೇ ಇಲ್ಲಾ ಎಂದು ಡಿಕೆ ಶಿವಕುಮಾರ್ ಗೆ ಟಾಂಗ್ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next