Advertisement

ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಕರ್ನಾಟಕ

01:06 AM Dec 01, 2019 | Team Udayavani |

ಸೂರತ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಫೈನಲ್‌ ಸೆಣಸಾಟಕ್ಕೆ ಸೂರತ್‌ನಲ್ಲಿ ವೇದಿಕೆ ಸಿದ್ಧಗೊಂಡಿದೆ. ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇರಿಸಿರುವ ಕರ್ನಾಟಕ ರವಿವಾರ ನೆರೆಯ ಎದುರಾಳಿ ತಮಿಳುನಾಡು ತಂಡದ ಸವಾಲನ್ನು ಎದುರಿಸಲಿದೆ.

Advertisement

ರಾಜ್ಯ ತಂಡವನ್ನು ಮನೀಷ್‌ ಪಾಂಡೆ, ತಮಿಳುನಾಡು ತಂಡವನ್ನು ದಿನೇಶ್‌ ಕಾರ್ತಿಕ್‌ ಮುನ್ನಡೆಸಲಿದ್ದಾರೆ. ಮೊದಲ ಸಲ ಟ್ರೋಫಿ ಎತ್ತುವುದು ತಮಿಳುನಾಡು ತಂಡದ ಗುರಿ.

ರಾಜ್ಯ ತಂಡಕ್ಕಿದೆ ದಿಗ್ಗಜರ ಬಲ
ಸಂಘಟಿತ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಅನುಭವಿ, ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಫೇವರಿಟ್‌ ಕೂಡ ಆಗಿದೆ. ಕೆ.ಎಲ್‌. ರಾಹುಲ್‌ ಮತ್ತು ದೇವದತ್‌ ಪಡಿಕ್ಕಲ್‌ ಭರ್ಜರಿ ಆರಂಭ ನೀಡುತ್ತಿದ್ದಾರೆ. ಇದು ತಂಡದ ಪ್ಲಸ್‌ ಪಾಯಿಂಟ್‌. ಹರ್ಯಾಣ ವಿರುದ್ಧ ಸೆಮಿಫೈನಲ್‌ನಲ್ಲಿ ಇವರಿಬ್ಬರು ಮೊದಲ ವಿಕೆಟಿಗೆ 125 ರನ್‌ ಜತೆಯಾಟ ನಿರ್ವಹಿಸಿದ್ದಾರೆ. ಫೈನಲ್‌ನಲ್ಲೂ ಅಮೋಘ ಆರಂಭ ನೀಡುವ ನಿರೀಕ್ಷೆ ಇದೆ.

ಟೆಸ್ಟ್‌ ಪಂದ್ಯಗಳಲ್ಲಿ ಅಮೋಘ ಯಶಸ್ಸು ಕಂಡು ರಾಜ್ಯ ತಂಡವನ್ನು ಕೂಡಿ ಕೊಂಡಿರುವ ಮಾಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ ಸರದಿಗೆ ಶಕ್ತಿ ತುಂಬಿದ್ದಾರೆ. ಮನೀಷ್‌ ಪಾಂಡೆ, ಕರುಣ್‌ ನಾಯರ್‌, ರೋಹನ್‌ ಕದಮ್‌, ಆಲ್‌ರೌಂಡರ್‌ ಕೆ. ಗೌತಮ್‌ ಸಿಡಿದರೆ ಕರ್ನಾಟಕ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ.

ಬೌಲಿಂಗ್‌ನಲ್ಲಿ ಅಭಿಮನ್ಯು ಮಿಥುನ್‌ ಹರ್ಯಾಣ ವಿರುದ್ಧ ಹ್ಯಾಟ್ರಿಕ್‌ ಸಹಿತ ಒಂದೇ ಓವರ್‌ನಲ್ಲಿ 5 ವಿಕೆಟ್‌ ಕಬಳಿಸಿದ ಹುರುಪಿನಲ್ಲಿದ್ದಾರೆ. ಇವರಿಗೆ ರೋನಿತ್‌ ಮೋರೆ, ವಿ. ಕೌಶಿಕ್‌ ಸಾಥ್‌ ನೀಡಲಿದ್ದಾರೆ.

Advertisement

ಅಪಾಯಕಾರಿ ತಮಿಳುನಾಡು
ತಮಿಳುನಾಡು ಕೂಡ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಆದರೆ ಸೂಪರ್‌ ಲೀಗ್‌ನಲ್ಲಿ ಕರ್ನಾಟಕ ವಿರುದ್ಧ 9 ವಿಕೆಟ್‌ಗಳ ಭಾರೀ ಸೋಲಿಗೆ ತುತ್ತಾಗಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ತಮಿಳುನಾಡು ಹಾತೊರೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next