Advertisement

ಸ್ವಿಫ್ಟ್ ಕಾರು-ಜೀಪ್ ಢಿಕ್ಕಿ: ಮದುಮಗ ಸಾವು, ತಾಯಿ ಸೇರಿ ಮೂವರಿಗೆ ತೀವ್ರ ಗಾಯ

12:03 PM Mar 06, 2021 | Team Udayavani |

ಹುಣಸೂರು: ಮದುವೆಗೆ ಬಟ್ಟೆ ಖರೀದಿಸಿ ಊರಿಗೆ ಮರಳುತ್ತಿದ್ದವರಿದ್ದ ಸ್ವಿಫ್ಟ್ ಕಾರಿಗೆ ತೂಫಾನ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಹಸೆಮಣೆ ಏರಬೇಕಿದ್ದ ವರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಈತನ ತಾಯಿ ಸೇರಿದಂತೆ ಕಾರಿನಲ್ಲಿದ್ದ ಮೂವರಿಗೆ ತೀವ್ರಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಹುಣಸೂರಿನ ಹಿರಿಕ್ಯಾತನಹಳ್ಳಿ ನಿವಾಸಿ ಜಗದೀಶ್ ರ ಪುತ್ರ ಅಭಿಷೇಕ್ ಗೌಡ (26 ವ) ಸಾವನ್ನಪ್ಪಿದ್ದ ದುರ್ದೈವಿ. ತಾಯಿ ಮಂಜುಳ ಹಾಗೂ ನಟರಾಜ್ ಎಂಬುವವರಿಗೆ ತೀವ್ರಗಾಯಗಳಾಗಿದ್ದು, ಚನ್ನರಾಯಪಟ್ಟಣ ಮತ್ತು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ರ ಅಭಿಷೇಕ್ ಗೌಡನ ಮದುವೆ ಸಂಬಂಧ ದಾವಣಗೆರೆಯಿಂದ ಬಟ್ಟೆ ಖರೀದಿಸಿದ್ದ ಜಗದೀಶ್ ಬಟ್ಟೆಯೊಂದಿಗೆ ಟಿ.ಟಿ.ವಾಹನದಲ್ಲಿ ಹುಣಸೂರಿನತ್ತ ಬರುತ್ತಿದ್ದರು. ಮದುಮಗ ಅಭಿಷೇಕ್ ಗೌಡ ಹಾಗೂ ತಾಯಿ ಮಂಜುಳ ಮತ್ತವನ ಸ್ನೇಹಿತ ನಟರಾಜ್ ಹಾಗೂ ಯುವತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಬೆಳಗಿನ ಜಾವ 3.30ರ ಸಮಯಕ್ಕೆ ಚನ್ನರಾಯಪ್ಪಣದ ಬಳಿ ಎದುರಿನಿಂದ ತೀವ್ರ ಮಂಜು ಬೀಳುತ್ತಿದ್ದರಿಂದ ಎದುರಿನಿಂದ ಬರುತ್ತಿದ್ದ ತುಫಾನ್ ಜೀಪ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮುಂದೆ ಕುಳಿತಿದ್ದ ನಟರಾಜ್ ಗೆ ತೀವ್ರಗಾಯವಾಗಿದೆ. ಮಂಜುಳರ ಕೈ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದೆ.

ಇದನ್ನೂ ಓದಿ:ಪಂಚ ಸಮರಕ್ಕೆ ಕಳೆ : ಪ. ಬಂಗಾಲದಲ್ಲಿ ಟಿಎಂಸಿಯಿಂದ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆದರೆ ಜಗದೀಶ್ ಹಿಂಬದಿಯ ಟಿಟಿ ವಾಹನದಲ್ಲಿದ್ದರಿಂದ ಪಾರಾಗಿದ್ದಾರೆ.

Advertisement

ಐದು ವರ್ಷಗಳ ಹಿಂದೆ ಜಗದೀಶರ ಮೊದಲ ಪುತ್ರ ಪ್ರವಾಸಕ್ಕೆ ಹೋಗಿದ್ದ ವೇಳೆ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು. ಇದೀಗ ಹಸೆಮಣೆ ಏರಬೇಕಿದ್ದ ಎರಡನೇ ಪುತ್ರ ಸಹ ಸಾವನ್ನಪ್ಪಿದ್ದು,ಮಕ್ಕಳ ಸಾವಿನಿಂದ ಕುಟುಂಬದಲ್ಲೀಗ ಅನಾಥ ಪ್ರಜ್ಣೆ ಕಾಡುತ್ತಿದೆ.

ಶವವನ್ನು ಚನ್ನರಾಯಪಟ್ಟಣ ಶವಾಗಾರದಲ್ಲಿರಿಸಲಾಗಿದೆ. ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next