Advertisement

ಚಳಿಯನ್ನೂ ಲೆಕ್ಕಿಸದೇ ಪತ್ರಿಕೆ ವಿತರಿಸುವ ಹುಡುಗರಿಗೆ ಸ್ವೆಟರ್ ನೀಡಿದ ಶುಕರಾಜ್ ತಾಳಕೇರಿ

11:29 AM Jan 05, 2022 | Team Udayavani |

ಕುಷ್ಟಗಿ: ಪ್ರತಿ ದಿನ ಬೆಳಗಿನ ಜಾವ ಮೈ ನಡುಕದ ಚಳಿ ಲೆಕ್ಕಿಸದೇ ಮನೆ‌‌ ಮನೆಗೂ ಪತ್ರಿಕೆ ಹಂಚುವ ಹುಡುಗರ ಪರಿಸ್ಥಿತಿಗೆ ಸ್ಥಳೀಯರಾದ ಶುಕರಾಜ್ ತಾಳಕೇರಿ ಅವರು ಸ್ವೆಟರ್ ಕೊಡಿಸಿ ಮಾನವೀಯ ಸ್ಪಂಧನೆ ಮೆರೆದಿದ್ದಾರೆ.

Advertisement

ಪ್ರಥಮ ದರ್ಜೆ ಗುತ್ತಿಗೆದಾರರಾದ ಶುಕರಾಜ್ ತಾಳಕೇರಿ ಅವರ ಮನೆಗೆ ಪತ್ರಿಕೆ ಹಾಕಲು ಬಂದ ಹುಡುಗನಿಗೆ ಯಾವೂದೇ ಸ್ವೆಟರ್ ಇರಲಿಲ್ಲ. ಚಳಿಯಲ್ಲಿ ನಡುಗುತ್ತಿದ್ದ ಹುಡುಗನ ಸ್ಥಿತಿಗೆ ಮನಃ ಕರಗಿ, ದಿನಪತ್ರಿಕೆ ಹಂಚುವ ಹುಡುಗರಿಗೆ ಸ್ವೆಟರ್ ಕೊಡಿಸಲು ನಿರ್ಧರಿಸಿದರಲ್ಲದೇ ಇದರ ಪ್ರಚಾರ ಬೇಡವೆ ಬೇಡವೆಂದಿದ್ದರು. ಆದರೆ ಉದಯವಾಣಿ ದಿನಪತ್ರಿಕೆಯ ಏಜೆಂಟ್ ಜಮದಗ್ನಿ ಗುರಿಕಾರ ಅವರು, ಮಾನವೀಯ ಕಾಳಜಿಗೆ ಯಾರೂ ಸ್ಪಂಧಿಸಿರಲಿಲ್ಲ.

ಶುಕರಾಜ್ ಅವರೇ ನಮ್ಮ‌ಕಷ್ಟಕ್ಕೆ ಕರಗಿ ಸ್ವೇಟರ್ ಕೊಡಿಸಿದ್ದು ನಮ್ಮ‌ಸೇವೆಯನ್ನು ಸಮಾಜ ಪ್ರೋತ್ಸಾಹಿಸಿದ್ದಾರೆ. ಅಂತೆಯೇ ಪತ್ರಿಕೆ ಹಂಚುವ ಹುಡುಗರ ಪಾಲಕರಿಗೆ ಸಮಾಜದಿಂದ ಈ ರೀತಿಯ ಮಾನವೀಯ ಸ್ಪಂಧನೆ ಸಿಕ್ಕಿರಿವುದು ಅವರೂ ಖುಷಿ ಹಂಚಿಕೊಂಡಿದ್ದಾರೆ. ಶುಕರಾಜ್ ತಾಳಕೇರಿ ಅವರ ಈ‌ ಸ್ವೇಟರ್ ಕೊಡುಗೆ ಪ್ರಚಾರಕ್ಕೆ ಅಲ್ಲಾ ಪ್ರೇರಣೆಗಾಗಿ ಆಗಿದೆ ಎಂದರು.

ಇದನ್ನೂ ಓದಿ : ಸೌರವ್ಯವಸ್ಥೆಯಾಚೆಗಿನ ನಿಗೂಢ ಜಗತ್ತಿನತ್ತ ಪಯಣ?

Advertisement

Udayavani is now on Telegram. Click here to join our channel and stay updated with the latest news.

Next