Advertisement

ಮರಡೂರ ಸೋದರಿಯರ ಮಧುರಗಾನ

12:38 PM Dec 16, 2017 | |

ಖಯಾಲ್‌ ಸಂಗೀತ ಅಕಾಡೆಮಿಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜೇರಟಗಿ ವಿರಕ್ತಮಠದ ಶ್ರೀ ಮಹಾಂತ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದು, ನಟ ರಾಘವೇಂದ್ರ ರಾಜಕುಮಾರ್‌ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Advertisement

ಹಿಂದೂಸ್ತಾನಿ ಗಾಯಕ ಪಂಡಿತ್‌ ಸೋಮನಾಥ ಮರಡೂರ ಹಾಗೂ ಗಾಯಕ ಮುದ್ದುಕೃಷ್ಣ ಉಪಸ್ಥಿತರಿರುವರು. ವಾಣಿ ಮರಡೂರ ಮತ್ತು ವೀಣಾ ಮರಡೂರ ಅವರ “ವಚನ ಗಾನ ಸಂಭ್ರಮ’ ಧ್ವನಿಸುರುಳಿ ಲೋಕಾರ್ಪಣೆಗೊಳ್ಳಲಿದೆ. ಸೋದರಿಯರ ಗಾಯನ ಕಾರ್ಯಕ್ರಮ ಹಾಗೂ ಪಂಡಿತ ಸೋಮನಾಥ ಮರಡೂರ ಅವರ ವಿಶೇಷ ಗಾಯನವೂ ನಡೆಯಲಿದೆ. 

ಎಲ್ಲಿ?: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ
ಯಾವಾಗ?: ಡಿ.17, ಭಾನುವಾರ 9ರಿಂದ 3 ಗಂಟೆ ತನಕ

Advertisement

Udayavani is now on Telegram. Click here to join our channel and stay updated with the latest news.

Next