Advertisement

Sanadalwood: ರಮ್ಯಾ ನಿರ್ಮಾಣದ ʼಸ್ವಾತಿ ಮುತ್ತಿನ ಮಳೆ ಹನಿಯೇʼ ರಿಲೀಸ್‌ಗೆ ಡೇಟ್ ಫಿಕ್ಸ್

01:09 PM Oct 24, 2023 | Team Udayavani |

ಬೆಂಗಳೂರು: ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ನ ಮೊದಲ ಸಿನಿಮಾ ʼಸ್ವಾತಿ ಮುತ್ತಿನ ಮಳೆ ಹನಿಯೇʼ ವಿಜಯದಶಮಿ ಹಬ್ಬಕ್ಕೆ ಬಿಗ್‌ ಅಪ್ಡೇಟ್‌ ನೀಡಿದೆ.

Advertisement

ರಾಜ್‌ ಬಿ ಶೆಟ್ಟಿ ಹಾಗೂ ಸಿರಿ ರವಿ ಕುಮಾರ್‌ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ʼಸ್ವಾತಿ ಮತ್ತಿನ ಮಳೆ ಹನಿಯೇʼ ಸಿನಿಮಾ ಶೂಟಿಂಗ್‌ ಮುಕ್ತಾಯದ ಬಳಿಕ ಟೈಟಲ್‌ ವಿವಾದದಲ್ಲಿ ಸಿಲುಕಿಕೊಂಡಿತ್ತು. ವಿವಾದದ ಬಳಿಕ ಇದೀಗ ಸಿನಿಮಾ ತಂಡ ಬಿಗ್‌ ಅಪ್ಡೇಟ್‌ವೊಂದನ್ನು ನೀಡಿದೆ.

ಮೋಹಕ ತಾರೆ ರಮ್ಯಾ ನಿರ್ಮಾಣದ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರು ನಿರ್ದೇಶನದೊಂದಿಗೆ ಲೀಡ್‌ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ವಿಜಯದಶಮಿ ಹಬ್ಬದಂದು ಸಿನಿಮಾದ ರಿಲೀಸ್‌ ಡೇಟದ ನ್ನು ಅನೌನ್ಸ್‌ ಮಾಡಿದೆ.

ಇದನ್ನೂ ಓದಿ: Tollywood: ದಸರಾ ಹಬ್ಬಕ್ಕೆ ಸ್ಪೆಷೆಲ್‌ ಅಪ್ಡೇಟ್‌ ಕೊಟ್ಟ ಮಹೇಶ್‌ ಬಾಬು ʼಗುಂಟೂರು ಕಾರಮ್ʼ

“ಎಲ್ಲರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು! ನಮ್ಮ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ” ಎಂದು ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಹೇಳಿದೆ.

Advertisement

ರಾಜ್‌ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಅವರೊಂದಿಗೆ ಬಾಲಾಜಿ ಮನೋಹರ್, ರೇಖಾ ಕೂಡ್ಲಿಗಿ ,ಸ್ನೇಹಶರ್ಮಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜ್‌.ಬಿ.ಶೆಟ್ಟಿ ಅವರು ʼಗುರುಡ ಗಮನ ವೃಷಭ ವಾಹನʼಕ್ಕೆ ಮ್ಯೂಸಿಕ್‌ ನೀಡಿದ್ದ ಮಿಧುನ್‌ ಮುಕುಂದನ್‌ ಈ ಚಿತತ್ರಕ್ಕೆ ಮ್ಯೂಸಿಕ್‌ ನೀಡಿದ್ದಾರೆ. ಪ್ರವೀಣ್‌ ಶ್ರೀಯಾನ್‌ ಈ ಚಿತ್ರಕ್ಕೆ ಡಿಓಪಿ ಆಗಿ ವರ್ಕ್‌ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next