Advertisement

ನ್ಯಾಯಾಧೀಶ ರಿಂದಸ್ವತ್ಛತಾ ಅಭಿಯಾನ

01:35 PM Oct 09, 2017 | |

ವಿಜಯಪುರ: ಸ್ವಚ್ಛ ಭಾರತ ಅಭಿಯಾನ ನಿಮಿತ್ತ ರವಿವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರು ಸ್ವತ್ಛತಾ ಕಾರ್ಯಕ್ರಮ ನಡೆಸಿದರು. ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಪಿ.ಎಸ್‌. ಬಾಳಿಕಾಯಿ ಮಾತನಾಡಿ, ಪ್ರತಿಯೊಬ್ಬರು ಸ್ವತ್ಛತಾ ಕಾರ್ಯದಲ್ಲಿ ತೊಡಗಬೇಕು.

Advertisement

ವಿಶೇಷವಾಗಿ ತಮ್ಮ ಸುತ್ತಮುತ್ತಲಿನ ಪರಿಸರ ಸ್ವತ್ಛವಾಗಿ ಇರಿಸಿಕೊಂಡಲ್ಲಿ ಮಾಲಿನ್ಯಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಕೋರ್ಟ್‌ ಸಿಬ್ಬಂದಿ ಹಾಗೂ ವಕೀಲರು ಪರಿಸರವನ್ನು ಶುದ್ಧವಾಗಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಕೆ.ಬಿ. ಗೀತಾ, ಜಿ.ಜಿ.ಕುರವತ್ತಿ, ಚನ್ನೇಗೌಡ, ಜೋಶಿ, ಎನ್‌.ಶೀಲಾ, ವಾಸುದೇವ ಗುಡಿ, ನಾಗೇಶ ಮೋಗೆರ, ಪ್ರವೀಣ ಬಂಕಾಪುರ, ಪಾಟೀಲ, ನಿವೇದಿತಾ ಮುನವಳ್ಳಿಮಠ, ಅಲ್ತಾಫ್‌, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಐ.ಎಸ್‌. ಘಾಳಿ, ಉತ್ತರ ವಲಯ ರೋಟರಿ ಕ್ಲಬ್‌ ಅಧ್ಯಕ್ಷ ಎಸ್‌.ಎಸ್‌.ಶಿರಾಡೋಣ, ಪಾಲಿಕೆ ಸದಸ್ಯ ಉಮೇಶ ವಂದಾಲ, ಸ್ವತ್ಛ ಭಾರತ ಸ್ವ ಅಭಿಯಾನ ಸಂಘದ ಅಧ್ಯಕ್ಷ ಜಿ.ಬಿ. ಕೋಳೂರ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next