Advertisement

ಚಿನ್ನ ಕೇಸು: ಸ್ವಪ್ನಾಗೆ ಜಾಮೀನು

07:08 PM Nov 02, 2021 | Team Udayavani |

ಕೊಚ್ಚಿ: ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ಸ್ವಪ್ನಾ ಸುರೇಶ್‌ಗೆ ಕೇರಳ ಹೈಕೋರ್ಟ್‌ ಜಾಮೀನು ನೀಡಿದೆ.

Advertisement

ಆಕೆಯ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅನ್ವಯ ಎನ್‌ಐಎ ಕೇಸು ದಾಖಲಿಸಿತ್ತು. ನ್ಯಾ.ಕೆ.ವಿನೋದ್‌ ಚಂದ್ರನ್‌ ಮತ್ತು ನ್ಯಾ.ಸಿ.ಜಯಚಂದ್ರನ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.

ಸ್ವಪ್ನಾ ಸುರೇಶ್‌ ಜತೆಗೆ ಸರಿತ್‌ ಪಿ.ಎಸ್‌.ಸೇರಿದಂತೆ ಇತರ ಏಳು ಮಂದಿಗೂ ಜಾಮೀನು ಸಿಕ್ಕಿದೆ.

ಆಕೆಯ ಪರ ವಾದಿಸಿದ ನ್ಯಾಯವಾದಿ ಸೂರಜ್‌ ಟಿ.ಇಲೆಂಜಿಕ್ಕಲ್‌ ಸ್ವಪ್ನಾ ವಿರುದ್ಧ ವಿದೇಶಿ ವಿನಿಮಯ ವ್ಯವಸ್ಥೆ ರಕ್ಷಣೆ ಮತ್ತು ಕಳ್ಳಸಾಗಣೆ ತಡೆ ಕಾಯ್ದೆಯನ್ವಯ ದಾಖಲಾಗಿದ್ದ  ಪ್ರಕರಣವನ್ನು ಹೈಕೋರ್ಟ್‌ ಅಸಿಂಧು ಎಂದು ಹೇಳಿದ್ದರಿಂದ ತಮ್ಮ ಕಕ್ಷಿದಾರಳನ್ನು 14 ತಿಂಗಳ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಬಹುದು ಎಂದು ಅರಿಕೆ ಮಾಡಿಕೊಂಡರು. ಅದಕ್ಕೆ ನ್ಯಾಯಪೀಠ ಪುರಸ್ಕಾರ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next