Advertisement

ತುಳು ಸಮ್ಮೇಳನ ಸಮಿತಿಯಿಂದ ಸ್ವಾಮೀಜಿ ಭೇಟಿ

04:05 PM May 06, 2018 | Team Udayavani |

ಸುಳ್ಯ: ಸುಳ್ಯದಲ್ಲಿ ಮೊದಲ ಬಾರಿಗೆ ಸುಳ್ಯ ತುಡರ್‌ ತುಳು ಕೂಟ ಹಾಗೂ ಶ್ರೀ ಶಾರದಾಂಬಾ ಸೇವಾ ಸಮಿತಿ ಆಶ್ರಯದಲ್ಲಿ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಸ್ವಾಗತ ಸಮಿತಿ ಸದಸ್ಯರು ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

Advertisement

ಈ ವೇಳೆ ಸ್ವಾಮಿಜಿಗಳು ತುಳು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗೋಕುಲ್‌ದಾಸ್‌, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ.ಜೆ., ಕೋಶಾ ಕಾರಿ ಜೆ.ಕೆ. ರೈ, ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಜಯರಾಮ ಶೆಟ್ಟಿ ಕೆ.ಎಸ್‌., ಪ್ರಚಾರ ಸಮಿತಿ ಸದಸ್ಯ ಭಾಗೀಶ್‌ ಕೆ.ಟಿ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next