Advertisement

ರಾಜ್ಯದ 8 ನಗರಗಳಿಗೆ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ

01:05 AM Nov 12, 2021 | Team Udayavani |

ಹೊಸದಿಲ್ಲಿ: ಕರ್ನಾಟಕದ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ ಸಹಿತ ಎಂಟು ನಗರಗಳಿಗೆ ಸ್ವಚ್ಛ ಸರ್ವೇಕ್ಷಣ ಸಫಾಯಿ ಮಿತ್ರ ಸುರಕ್ಷ ಚಾಲೆಂಜ್‌ ಪ್ರಶಸ್ತಿ ಲಭಿಸಿದೆ. ಇವುಗಳಿಗೆ ಕಸಮುಕ್ತ ನಗರಗಳು ಎಂಬ ಹೆಗ್ಗಳಿಕೆಯೂ ಸಿಕ್ಕಿದೆ.

Advertisement

ನ. 20ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅದೇ ಸಂದರ್ಭದಲ್ಲಿ ಯಾವ ನಗರಗಳಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬ ಬಗ್ಗೆಯೂ ಘೋಷಣೆ ಮಾಡಲಾಗುತ್ತದೆ.

ರಾಜ್ಯಗಳ ವಿಭಾಗದಲ್ಲಿ ಕರ್ನಾಟಕಕ್ಕೂ ಪ್ರಶಸ್ತಿಯ ಗೌರವ ಸಿಕ್ಕಿದೆ. ಅಲ್ಲದೆ, ಕಸಮುಕ್ತ ನಗರಗಳೆಂದು ಮುಧೋಳ, ಹೊಸದುರ್ಗ, ಕೃಷ್ಣರಾಜನಗರ, ಕುಮಟಾ, ಪಿರಿಯಾಪಟ್ಟಣಕ್ಕೂ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ:ಜಿ. ಶಂಕರ್‌ ಆರೋಗ್ಯಸುರಕ್ಷಾ ಕಾರ್ಡ್‌ಗಳ ನವೀಕರಣ

 

Advertisement
Advertisement

Udayavani is now on Telegram. Click here to join our channel and stay updated with the latest news.

Next