Advertisement
ಸ್ವತ್ಛ ಭಾರತ್ ಅಭಿಯಾನ ಮತ್ತು ಸ್ವತ್ಛ ಸುಂದರ ಉಡುಪಿ ನಗರ ಜನಾರೋಗ್ಯಕ್ಕೆ ಆಧಾರ ಎಂಬಂತೆ ನಮ್ಮ ನಗರ ಸ್ವತ್ಛ ಸುಂದರವಾಗಿದ್ದರೆ ನಾವೆಲ್ಲರೂ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎನ್ನುವ ಧ್ಯೇಯ ವಾಕ್ಯದೊಂದಿಗೆ 2017ರ ಜ. 12ರ ವಿವೇಕಾನಂದರ ಜನ್ಮದಿನದಂದು ಆರಂಭಿಸಲಾಯಿತು. ಪ್ರತೀ ರವಿವಾರ ಬೆಳಗ್ಗೆ 6 – 7ರ ತನಕ ಸಿಟಿಬಸ್ ನಿಲ್ದಾಣದ ಗಾಂಧಿ ಆಸ್ಪತ್ರೆ ಎದುರಿನ ರಸ್ತೆಯಿಂದ ಕಲ್ಸಂಕ ವೃತ್ತದವರೆಗಿನ ರಾಜ ಮಾರ್ಗದ ಇಕ್ಕೆಲ ಗಳಲ್ಲಿಯೂ ಸ್ವತ್ಛತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
Related Articles
ಅಧಿಕಾರಿ ನರಸಿಂಹಮೂರ್ತಿ, ಪ್ರೊ| ಕೆ.ಎಸ್. ಅಡಿಗ ದಂಪತಿ, ಕರ್ಣಾಟಕ ಬ್ಯಾಂಕ್ನ ನಿವೃತ್ತ ಅಧಿಕಾರಿ ಹಯವದನ ಭಟ್, ನವೀನ್ ಕುಮಾರ್, ರಮೇಶ್, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ, ಟ್ಯಾಪ್ಮಿ ಮಣಿಪಾಲದ ಸೋಶಿಯಲ್ ಎಂಡೋವರ್ ಗ್ರೂಪ್ನ ವಿಕಾಸ್ , ಆಸ್ಪತ್ರೆಯ ಸಿಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
Advertisement
ಆರಂಭದ ದಿನಗಳಲ್ಲಿ ಅಭಿಯಾನಕ್ಕೆ ಪ್ರೋತ್ಸಾಹಿಸಿದ ದಿ| ಬೆನೆಡಿಕ್ಟ್ ಮಾರ್ಟಿಸ್ ಮೂಡುಬೆಳ್ಳೆ ಅವರನ್ನು ಸ್ಮರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ವ್ಯಾಸರಾಜ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.