Advertisement

ಸುವರ್ಣ ನದಿ ನೀರಿನಿಂದ ಬಜೆ ಡ್ಯಾಮ್ ತುಂಬಿಸುವ ಯೋಜನೆಗೆ ಚಾಲನೆ

06:58 PM Apr 09, 2020 | keerthan |

ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರನ್ನು ತಲುಪಿಸುವ ಕಾರ್ಯಕ್ಕಾಗಿ ಸ್ವರ್ಣ ನದಿಯ ನೀರನ್ನು ಬಜೆಯಲ್ಲಿ ಸಂಗ್ರಹ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Advertisement

ಈ ಕಾರ್ಯಯೋಜನೆಯ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಅದರಂತೆ ಹಿರಿಯಡ್ಕ ಪಂಚಾಯತ್ ವ್ಯಾಪ್ತಿಯ ಪಂಚನಬೆಟ್ಟುವಿನ ಸಾಣೆ ಬೆಟ್ಟು ಎಂಬಲ್ಲಿ ಒಟ್ಟು ಮೂರು ಪಂಪುಗಳನ್ನು ಅಳವಡಿಸಿ ನೀರನ್ನು ಮೇಲಕ್ಕೆತ್ತಿ ಶಿರೂರು ಡ್ಯಾಮಿಗೆ ಹರಿಸಿ, ಅಲ್ಲಿ ಎರಡು ಪಂಪನ್ನು ಅಳವಡಿಸಿ ಬಜೆ ಎಂಬಲ್ಲಿ ನೀರು ಸಂಗ್ರಹಣೆ ಮಾಡುಲಾಗುವುದು. ಇದರಿಂದ ಹಿಂದಿನ ಸಾಲಿನಲ್ಲಿ ಉಂಟಾಗಿದ್ದ ನೀರಿನ ಕೊರತೆಯನ್ನು ನೀಗಿಸುವ ದೃಷ್ಟಿಕೋನವನ್ನು ಇಟ್ಟುಕೊಂಡು ಈ ಬಾರಿ ನಗರ ಸಭೆ ಮತ್ತು ಗ್ರಾಮ ಪಂಚಾಯತ್ ಗಳಿಗೆ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.

ಶಾಸಕ ರಘುಪತಿ ಭಟ್ ಅವರು ಜಿಲ್ಲಾಧಿಕಾರಿ ಜಗದೀಶ್, ನಗರಸಭೆಯ ಎಲ್ಲಾ ಅಧಿಕಾರಿ ವರ್ಗದವರಿಗೆ ಈ ನಿಟ್ಟಿನಲ್ಲಿ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next