Advertisement

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

09:32 PM May 21, 2024 | Team Udayavani |

ಮಂಗಳೂರು: ಅಂಗಡಿಯೊಂದರ ಬಳಿ ಮುಂಜಾವ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ಓರ್ವನನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಪೊಲೀಸರು ಮೇ 20ರಂದು ಮುಂಜಾವ 3.30ರ ಸುಮಾರಿಗೆ ನಗರದ ದಕ್ಕೆ ಪರಿಸರದಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಅಂಗಡಿಯೊಂದರ ಬಳಿ ಕತ್ತಲಿನಲ್ಲಿ ಕುಳಿತುಕೊಂಡಿದ್ದ ವ್ಯಕ್ತಿ ಪೊಲೀಸರನ್ನು ಕಂಡು ಮರೆಮಾಚಲು ಯತ್ನಿಸಿದ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಪೊಲೀಸರು ವಶಕ್ಕೆ ಪಡೆದುಕೊಂಡವನನ್ನು ಕಸಬಾ ಬೆಂಗ್ರೆಯ ನಿಜಾಮ್‌ (26) ಎಂದು ಗುರುತಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next