Advertisement

Manipur ; ಭಾರತದ ವಿರುದ್ಧ ಸಂಚು ರೂಪಿಸಿದ್ದ ಉಗ್ರನ ಬಂಧನ

06:22 PM Sep 23, 2023 | Team Udayavani |

ಇಂಫಾಲ : ಮಣಿಪುರದಲ್ಲಿನ ಜನಾಂಗೀಯ ಅಶಾಂತಿಯನ್ನು ಬಳಸಿಕೊಳ್ಳುವ ಮೂಲಕ ಭಾರತದ ವಿರುದ್ಧ ಸಂಚು ರೂಪಿಸಿದ್ದ, ಮ್ಯಾನ್ಮಾರ್ ಮೂಲದ ಬಂಡುಕೋರ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರನನ್ನು ಎನ್‌ಐಎ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಮೊಯರಂಗತೇಮ್ ಆನಂದ್ ಸಿಂಗ್ ಎಂಬಾತನನ್ನು ಮಣಿಪುರದಲ್ಲಿ ಬಂಧಿಸಿ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಕ್ತಾರರು ತಿಳಿಸಿದ್ದಾರೆ.

ಪೊಲೀಸ್ ಶಸ್ತ್ರಾಗಾರದಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಮಣಿಪುರ ಪೊಲೀಸರು ಬಂಧಿಸಿದ ಐವರಲ್ಲಿ ಸಿಂಗ್ ಒಬ್ಬ. ಈ ಬಂಧನವು ಗ್ರಾಮ ರಕ್ಷಣಾ ಕಾರ್ಯಕರ್ತರು ಎಂದು ಹೇಳಿಕೊಳ್ಳುತ್ತಿದ್ದ ಬಹುಸಂಖ್ಯಾತ ಸಮುದಾಯದ ಆಂದೋಲನಕ್ಕೆ ಕಾರಣವಾಗಿತ್ತು. ಶುಕ್ರವಾರ ಸ್ಥಳೀಯ ನ್ಯಾಯಾಲಯ ಐವರಿಗೂ ಜಾಮೀನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next