Advertisement

ಶಂಕಿತ ಮಂಗನ ಕಾಯಿಲೆಗೆ ಬಲಿ

11:08 PM Apr 29, 2019 | Lakshmi GovindaRaju |

ಸಾಗರ: ಕಳೆದ ಐದು ತಿಂಗಳಿನಿಂದ ಸಾಗರ ತಾಲೂಕನ್ನು ಕಾಡುತ್ತಿರುವ ಮಂಗನ ಕಾಯಿಲೆ ಮತ್ತೂಂದು ಬಲಿ ಪಡೆದಿದೆ. ತಾಲೂಕಿನ ತಾಳಗುಪ್ಪ ಸಮೀಪದ ಹಿರೇಮನೆಯ ಸುಬ್ಬಮ್ಮ ಶೆಡ್ತಿ (79) ಶಂಕಿತ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

Advertisement

ಸುಬ್ಬಮ್ಮ ಅವರು ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಸೋಮವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ತಲವಾಟ ಗ್ರಾಪಂ ವ್ಯಾಪ್ತಿಯಲ್ಲಿ ಒಂದೂವರೆ ತಿಂಗಳ ಹಿಂದೆಯೇ ಮಂಗ ಮೃತಪಟ್ಟಿದ್ದು, ಇದರಲ್ಲಿ ಕೆಎಫ್‌ಡಿ ವೈರಸ್‌ ಪತ್ತೆಯಾಗಿತ್ತು. ಹೀಗಾಗಿ, ಹಿರೇಮನೆ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೆಎಫ್‌ಡಿ ಪ್ರತಿರೋಧಕ ಲಸಿಕೆ ನೀಡಲಾಗಿತ್ತು.

ಆದರೂ ಪಂಚಾಯತ್‌ ವ್ಯಾಪ್ತಿಯಲ್ಲಿ ಒಬ್ಬರು ಕಾಯಿಲೆಗೆ ಬಲಿಯಾಗಿದ್ದಾರೆ. ಡಿಸೆಂಬರ್‌ನಿಂದ ಅರಳಗೋಡು ಗ್ರಾಪಂನ 20 ಜನ ಈ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದು, ಇದೇ ಮೊದಲ ಬಾರಿಗೆ ಅರಳಗೋಡು ಅಲ್ಲದೆ ತಾಲೂಕಿನ ಬೇರೆ ಪ್ರದೇಶದಲ್ಲಿ ಸಾವು ಸಂಭವಿಸಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next