Advertisement

ಶಂಕಾಸ್ಪದ ಚಟುವಟಿಕೆ ಪೊಲೀಸರನ್ನು ಕಂಡು ಪರಾರಿ; ತಲವಾರು ಪತ್ತೆ

09:40 PM Jun 08, 2020 | Sriram |

ಬಂಟ್ವಾಳ: ನಂದಾವರದಲ್ಲಿ ಕಾರೊಂದರ ಬಳಿ ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದ ಗುಂಪೊಂದು ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಪೊಲೀಸರು ಅನುಮಾನಗೊಂಡು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ತಲವಾರು ಹಾಗೂ ದೊಣ್ಣೆಗಳು ಪತ್ತೆಯಾಗಿದೆ.

Advertisement

ಬಂಟ್ವಾಳ ನಗರ ಪಿಎಸ್ಐ ಅವಿನಾಶ್ ಹಾಗೂ ಸಿಬಂದಿ ಗಸ್ತು ತಿರುತ್ತಿದ್ದಾಗ ನಂದಾವರದಲ್ಲಿ ಗುಂಪೊಂದು ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದು, ಪೊಲೀಸರನ್ನು ಕಂಡು ಪರಾರಿಯಾಗಿದೆ. ಹೀಗಾಗಿ ಪೊಲೀಸರು ಕಾರನ್ನು ಪರಿಶೀಲಿಸಿದಾಗ ತಲವಾರು ಹಾಗೂ ದೊಣ್ಣೆಗಳು ಪತ್ತೆಯಾಗಿದೆ.

ಪರಾರಿಯಾದ ಗುಂಪನ್ನು ಮುಸ್ತಫಾ ಹಾಗೂ ತಂಡ ಎಂದು ಗುರುತಿಸಲಾಗಿದ್ದು, ಯಾವುದೋ ಅಪರಾಧ ಕೃತ್ಯವನ್ನು ಎಸೆಯುವ ಉದ್ದೇಶದಿಂದ ಅಲ್ಲಿ ನಿಂತಿದ್ದರು ಎಂದು ಪೊಲೀಸರು ಅನುಮಾನಿಸಿದ್ದಾರೆ.

ಸ್ಥಳದಲ್ಲಿ ಮುಸ್ತಫಾ ತಂಡ ಹಾಗೂ ಕಣ್ಣೂರಿನ ತಂಡದ ಮಧ್ಯೆ ಗಲಾಟೆ ನಡೆದಿರುವುದು ಬೆಳಕಿಗೆ ಬಂದಿದ್ದು, ತಂಡದ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಪೊಲೀಸರು ಪರಾರಿಯಾದ ತಂಡದ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next