Advertisement

ಕಾಮನ್‌ವೆಲ್ತ್‌ ಗೇಮ್ಸ್‌ಗೆ ಸುಶೀಲ್‌ ಕುಮಾರ್‌ ಅನುಮಾನ

11:13 AM Jan 13, 2018 | |

ಹೊಸದಿಲ್ಲಿ: ಭಾರತದ ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್‌ಅವರಿಗೆ ಮತ್ತೆ ಆತಂಕ ಎದುರಾಗಿದೆ. ಕುಸ್ತಿಪಟು ಪ್ರವೀಣ್‌ ರಾಣ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಸಲ್ಲಿಸುವ ಆರೋಪ ಪಟ್ಟಿಯಲ್ಲಿ ಸುಶೀಲ್‌ ಹೆಸರು ಇದ್ದರೆ, ಅವರು ಕಾಮನ್‌ವೆಲ್ತ್‌ ಗೇಮ್ಸ್‌ ಕೂಟದಿಂದಲೇ ಹೊರ ಬೀಳುವ ಅಪಾಯವಿದೆ.

Advertisement

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣ ಭಾರತೀಯ ಕುಸ್ತಿ ಒಕ್ಕೂಟಕ್ಕೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸುಶೀಲ್‌ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಭಾರತೀಯ ಕುಸ್ತಿ ಸಂಸ್ಥೆ ಸುಶೀಲ್‌ಗೆ ನೊಟೀಸ್‌ ನೀಡಿದೆ. ಆದರೆ ಇದೀಗ ದಿಲ್ಲಿ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಒಮ್ಮೆ ಆರೋಪ ಪಟ್ಟಿಯಲ್ಲಿ ಸುಶೀಲ್‌ ಕುಮಾರ್‌ ಹೆಸರು ಇದ್ದರೆ ಕಾಮನ್‌ವೆಲ್ತ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಅವರು  ಕಳೆದುಕೊಳ್ಳುವ ಸಾಧ್ಯತೆ ಇದೆ.

ಕಾಮನ್‌ವೆಲ್ತ್‌ ಗೇಮ್ಸ್‌ನ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಸುಶೀಲ್‌ 4-3 ರಿಂದ ಜಿತೇಂದ್ರ ಕುಮಾರ್‌ ವಿರುದ್ಧ ಗೆಲುವು ಪಡೆದು ಗೇಮ್ಸ್‌ಗೆ ಅರ್ಹತೆಯನ್ನೂ ಪಡೆದಿದ್ದರು. ಆದರೆ ಸೆಮಿಫೈನಲ್‌ ಪಂದ್ಯದ ಅನಂತರ ಪ್ರವೀಣ್‌ ರಾಣ ಮೇಲೆ ಸುಶೀಲ್‌ ಕುಮಾರ್‌ ಬೆಂಬಲಿಗರು ಹಲ್ಲೆ ನಡೆಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next