Advertisement

ದ.ಕ. ಜಿಲ್ಲಾ ಜೆಡಿಎಸ್‌ ಮುಖಂಡ ಸುಶೀಲ್‌ ನೊರೊನ್ಹಾ ಅವರ ಅಂತ್ಯಯಾತ್ರೆ

12:07 AM Jan 16, 2023 | Team Udayavani |

ಮಂಗಳೂರು : ದ.ಕ. ಜಿಲ್ಲಾ ಜೆಡಿಎಸ್‌ ಮುಖಂಡ, ಮಂಗಳೂರು ಧರ್ಮಪ್ರಾಂತದ ಮಾಜಿ ಕಾರ್ಯದರ್ಶಿ, ಕ್ರಿಸ್ಟೋಫರ್‌ ಅಸೋಸಿಯೇಶನ್‌ ಅಧ್ಯಕ್ಷ ಹಾಗೂ ಸುಶೀಲ್‌ ಎಲೆಕ್ಟ್ರಿಕಲ್ಸ್‌ನ ಮಾಲಕ ಜಾನ್‌ ಸುಶೀಲ್‌ ನೊರೊನ್ಹಾ ಅವರ ಅಂತ್ಯಯಾತ್ರೆಯು ಕುಲಶೇಖರದ ಹೋಲಿಕ್ರಾಸ್‌ ಚರ್ಚ್‌ನಲ್ಲಿ ರವಿವಾರ ನೆರವೇರಿತು.

Advertisement

ಬಲಿಪೂಜೆಯ ನೇತೃತ್ವವನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ|ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ವಹಿಸಿ ಸಂತಾಪ ಸೂಚಿಸಿದರು.

ಧರ್ಮಪ್ರಾಂತದ ವಿಶ್ರಾಂತ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಅವರು ಅಂತಿಮ ವಿಧಿವಿಧಾನಗಳನ್ನು ನಡೆಸಿ ಪ್ರಾರ್ಥಿಸಿದರು. ಸಂತ ಅಂತೋನಿ ಆಶ್ರಮದ ನಿರ್ದೇಶಕ ವಂ| ಜೆ. ಬಿ.ಕ್ರಾಸ್ತಾ ಅವರು ಪ್ರವಚನ ನೀಡಿದರು. ಧರ್ಮಪ್ರಾಂತದ ವಿಕಾರ್‌ ಜನರಲ್‌ ವಂ| ಮ್ಯಾಕ್ಸಿಂ ನೊರೊನ್ಹಾ ಹಾಜರಿದ್ದರು.

ಧರ್ಮಪ್ರಾಂತದ ಕಾರ್ಯದರ್ಶಿ ಜಾನ್‌ ಡಿ’ಸಿಲ್ವ, ಸಾರ್ವಜನಿಕ ಅಧಿಕಾರಿ ರೋಯ್‌ ಕ್ಯಾಸ್ಟಲಿನೊ, ಕುಲಶೇಖರ ಚರ್ಚ್‌ನ ಧರ್ಮಗುರು ವಂ| ಕ್ಲೀಫರ್ಡ್‌ ಫೆರ್ನಾಂಡಿಸ್‌, ಮಾಜಿ ಶಾಸಕ ಜೆ.ಆರ್‌.ಲೋಬೋ, ವಿ.ಪರಿಷತ್‌ ಮಾಜಿ ಸದಸ್ಯ ಐವನ್‌ ಡಿ’ಸೋಜಾ, ಕುಲಶೇಖರ ಚರ್ಚ್‌ನ ಉಪಾಧ್ಯಕ್ಷ ರೂತ್‌ ಸಿಲ್ವಿಯಾ ಕ್ಯಾಸ್ತಲಿನೊ, ಮೃತರ ಸಹೋದರ, ವಕೀಲ ಹಾಗೂ ಧರ್ಮಪ್ರಾಂತದ ಮಾಜಿ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ, ಮೃತರ ಪತ್ನಿ ಎಡ್ನ ನೊರೊನ್ಹಾ, ಮಗ ಏಂಜಲೊ ನೊರೊನ್ಹಾ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next