Advertisement

“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’

12:50 AM Sep 22, 2020 | mahesh |

ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಸಾವಿಗೂ 5 ದಿನ ಮೊದಲು ಸುಶಾಂತ್‌ ತಮ್ಮ ಸಹೋದರಿಗೆ ಕಳುಹಿಸಿದ ಸಂದೇಶವೊಂದು ಈಗ ಬಹಿರಂಗವಾಗಿದೆ. ಅದರಲ್ಲಿ ಅವರು ತಮ್ಮ ಸುರಕ್ಷತೆಯ ಬಗ್ಗೆಯೇ ಆತಂಕ ವ್ಯಕ್ತಪಡಿಸಿದ್ದು, “ನನಗೆ ಭಯವಾಗುತ್ತಿದೆ. ನನ್ನನ್ನು ಕೊಲ್ಲುತ್ತಾರೆ’ ಎಂದು ಬರೆದಿರುವು ದಾಗಿ ಟೈಮ್ಸ್‌ ನೌ ವರದಿ ಮಾಡಿದೆ.

Advertisement

ಸಹೋದರಿ ಮೀಟು ಸಿಂಗ್‌ಗೆ ಜೂ.9 ರಂದು ಸುಶಾಂತ್‌ ಈ ಸಂದೇಶ ಕಳುಹಿಸಿ ದ್ದರು. ಜೂ.14ರಂದು ಸುಶಾಂತ್‌ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಫ್ಲ್ಯಾಟ್‌ನಲ್ಲೇ ಪತ್ತೆಯಾಗಿತ್ತು. ಈ ಸಂದೇಶ ದಲ್ಲಿ ಸುಶಾಂತ್‌, “ತಾನು ರಿಯಾಳನ್ನು ಸಂಪ ರ್ಕಿಸಲು ಯತ್ನಿಸುತ್ತಿದ್ದು, ಆಕೆ ಕರೆ ಸ್ವೀಕರಿಸು ತ್ತಿಲ್ಲ. ನಾನು ತುರ್ತಾಗಿ ಆಕೆ ಯೊಂದಿಗೆ ಮಾತನಾಡಬೇಕಿದೆ. ಆ ಜನರು ನನ್ನನ್ನು ಸಿಲುಕಿಸಲು ಯತ್ನಿಸುತ್ತಾರೆಂಬ ಭೀತಿ ಶುರು ವಾಗಿದೆ’ ಎಂದು ಬರೆದಿದ್ದರು ಎನ್ನಲಾಗಿದೆ.

ಪಾಯಲ್‌ ವಿರುದ್ಧ ಕಾನೂನು ಹೋರಾಟ: ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ನಟಿ ಪಾಯಲ್‌ ಘೋಷ್‌ ವಿರುದ್ಧ ಮತ್ತೂಬ್ಬ ನಟಿ ರಿಚಾ ಛಡ್ಡಾ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿ ದ್ದಾರೆ. ಪಾಯಲ್‌ ಅವರು, “ನಟಿ ರಿಚಾ ಸೇರಿದಂತೆ ಇನ್ನೂ ಅನೇಕ ನಟಿಯ ರೊಂದಿಗೆ ಕಶ್ಯಪ್‌ ಸಂಬಂಧ ಹೊಂದಿದ್ದರು’ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ನನ್ನನ್ನು ಅವಹೇಳನಕಾರಿಯಾಗಿ ಎಳೆದು ತರಲಾಗಿದೆ ಎಂದು ರಿಚಾ ಆರೋಪಿಸಿದ್ದು, ಪಾಯಲ್‌ ವಿರುದ್ಧ ನೋಟಿಸ್‌ ಜಾರಿ ಮಾಡಿದ್ದಾರೆ.

ಶ್ರದ್ಧಾ ಕಪೂರ್‌, ಸಾರಾಗೂ ಸಮನ್ಸ್‌?
ಬಾಲಿವುಡ್‌ ಡ್ರಗ್‌ ಪ್ರಕರಣ ಸಂಬಂಧ ಸುಮಾರು 12 ಮಂದಿಯನ್ನು ಬಂಧಿಸಿರುವ ಎನ್‌ಸಿಬಿ, ಸದ್ಯದಲ್ಲೇ ಶ್ರದ್ಧಾ ಕಪೂರ್‌, ಸಾರಾ ಅಲಿ ಖಾನ್‌ ಸೇರಿದಂತೆ ಕೆಲವು ಸೆಲೆಬ್ರಿಟಿಗಳಿಗೆ ಸಮನ್ಸ್‌ ಜಾರಿ ಮಾಡುವ ಸಾಧ್ಯತೆಯಿದೆ. ಬಾಲಿವುಡ್‌ನ‌ ಟಾಪ್‌ 5 ಸೆಲೆಬ್ರಿಟಿಗಳ ಹೆಸರನ್ನೂ ಎನ್‌ಸಿಬಿ ಪಟ್ಟಿ ಮಾಡಿದೆ. ಡಿ, ಕೆ, ಎನ್‌, ಜೆ, ಎಸ್‌ ಎಂಬ ಇನೀಷಿಯಲ್‌ಗ‌ಳಿರುವ ಸೆಲೆಬ್ರಿಟಿಗಳು ಡ್ರಗ್‌ ಕುರಿತು ವಾಟ್ಸ್‌ಆ್ಯಪ್‌ ಚಾಟ್‌ ಮಾಡಿರುವ ಮಾಹಿತಿ ಸಿಕ್ಕಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next