Advertisement

ಅಭಿಮಾನಿಗಳಿಗೆ ‘ವಿಕ್ರಾಂತ್ ರೋಣ’ ಚಿತ್ರತಂಡದಿಂದ ಸರ್‍ ಪ್ರೈಸ್  

04:36 PM Apr 10, 2021 | Team Udayavani |

ಬೆಂಗಳೂರು: ಜಗತ್ತಿನ ಅತೀ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಪಾ ಮೇಲೆ ಟೈಟಲ್ ಲಾಂಚ್ ಮಾಡಿಕೊಂಡು ಬೆಟ್ಟದಷ್ಟು ನಿರೀಕ್ಷೆ ಮೂಡಿಸಿರುವ ಕನ್ನಡದ ಸಿನಿಮಾ ‘ವಿಕ್ರಾಂತ್ ರೋಣ’ ಚಿತ್ರತಂಡ ಇದೀಗ ಮತ್ತೊಂದು ಸರ್‍ ಪ್ರೈಸ್ ನೀಡಲು ಮುಂದಾಗಿದೆ.

Advertisement

ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ನಾಯಕ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಏಪ್ರಿಲ್ 15 ರಂದು ಬೆಳಿಗ್ಗೆ 11.10ಕ್ಕೆ ಅಚ್ಚರಿಯೊಂದು ಕಾದಿದೆ ಎಂದು ಹೇಳಿಕೊಂಡಿದ್ದಾರೆ.

ಏನಿರಬಹುದು ಅಚ್ಚರಿ ?

ಈಗಾಗಲೇ ವಿಕ್ರಾಂತ್ ರೋಣ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಏಪ್ರಿಲ್ 15 ರಂದು ಚಿತ್ರತಂಡದಿಂದ ಯಾವ ಸುದ್ದಿ ಹೊರಬರಲಿದೆ ಎನ್ನುವ ಕುತೂಹಲ ಕಿಚ್ಚನ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಅಂದು ವಿಕ್ರಾಂತ ರೋಣ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಬಹುದೇ ಎನ್ನುವ ಕುತೂಹಲಕಾರಿ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

Advertisement

ಅನೂಪ್ ಭಂಡಾರಿ ನಿರ್ದೇಶನದ  ವಿಕ್ರಾಂತ್ ರೋಣ ಶೂಟಿಂಗ್ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇದು ಆ್ಯಕ್ಷನ್ ಓರಿಯೆಂಟೆಂಡ್ ಸಿನಿಮಾವಾಗಿದ್ದು, ಕಳೆದ ವರ್ಷ ಲಾಕ್ ಡೌನ್ ನಂತರ ಜೂನ್ ತಿಂಗಳಿನಲ್ಲಿ ವಿಕ್ರಾಂತ್ ರೋಣ ಶೂಟಿಂಗ್ ಆರಂಭವಾಗಿತ್ತು. ಇನ್ನು ಎರಡು ಹಾಡು ಮತ್ತು ಟಾಕಿ ಪೋರ್ಷನ್ ಬಾಕಿ ಉಳಿದಿದೆ. ಈ ಶೆಡ್ಯೂಲ್ ನಲ್ಲಿ ಬಾಕಿ ಉಳಿದ ಸನ್ನಿವೇಶಗಳ ಶೂಟಿಂಗ್ ಮುಗಿಯಲಿದೆ. ಮುಂದಿನ ಕೆಲ ದಿನಗಳಲ್ಲಿ ಶೂಟಿಂಗ್ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಮೇ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ.

ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, 50 ದೇಶಗಳಲ್ಲಿ ರಿಲೀಸ್ ಆಗಲಿದೆ. ಭಾರತದ ಹಲವು ಭಾಷೆಗಳ ಜೊತೆಗೆ ಫ್ರೆಂಚ್, ಅರೇಬಿಕ್, ಸ್ಪ್ಯಾನಿಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಡಬ್ ಆಗಲಿದೆ ಎನ್ನುವ ಸುದ್ದಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next