Advertisement

ಅವಮಾನಕ್ಕೆ ಪ್ರತಿಯಾಗಿ ಸರ್ಜಿಕಲ್‌ ದಾಳಿ: ಪಾರೀಕರ್‌

03:45 AM Jul 02, 2017 | Team Udayavani |

ಪಣಜಿ/ಹೊಸದಿಲ್ಲಿ: “2015ರ ಜೂ.4ರಂದು ಮಣಿಪುರ ದಲ್ಲಿ ಉಗ್ರರು ಸೇನಾ ಪಡೆಗಳ ಮೇಲೆ ದಾಳಿ ನಡೆಸಿ 18 ಯೋಧರನ್ನು ಹತ್ಯೆಗೈದಿದ್ದರು. ಈ ಕುರಿತು ಟಿವಿ ಆ್ಯಂಕರ್‌ವೊಬ್ಬರು ಸಚಿವ ರಾಜ್ಯವರ್ಧನ್‌ ರಾಥೋಡ್‌ರಿಗೆ ಕೇಳಿದ್ದ ಪ್ರಶ್ನೆಯಿಂದ ನಾನು ಅವಮಾನಕ್ಕೀಡಾದೆ. ಇದೇ ಕಾರಣಕ್ಕಾಗಿ ಪಿಒಕೆಯಲ್ಲಿ ಸರ್ಜಿಕಲ್‌ ದಾಳಿ ನಡೆಸಿದೆವು. ದಾಳಿಯನ್ನು 15 ತಿಂಗಳ ಮುಂಚೆಯೇ ಪ್ಲ್ರಾನ್‌ ಮಾಡಿದ್ದೆವು.’

Advertisement

ಇದು ಗೋವಾ ಸಿಎಂ, ಮಾಜಿ ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಅವರು ಆಡಿರುವ ಮಾತುಗಳು. ಪಣಜಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2016ರ ಸೆಪ್ಟೆಂಬರ್‌ನಲ್ಲಿ ನಡೆದ ಸರ್ಜಿಕಲ್‌ ದಾಳಿಗೆ 15 ತಿಂಗಳ ಮುಂಚೆ ಯೋಜನೆ ರೂಪಿಸಿದ್ದೆವು. ಹೆಚ್ಚುವರಿ ಪಡೆಗಳಿಗೆ ತರಬೇತಿ ನೀಡಿದ್ದೆವು. ಸಲಕರಣೆ, ಶಸ್ತ್ರಾಸ್ತ್ರಗಳನ್ನು ಆದ್ಯತೆಯ ಮೇರೆಗೆ ಮೊದಲೇ ಖರೀದಿಸಿದ್ದೆವು ಎಂದಿದ್ದಾರೆ ಪಾರೀಕರ್‌. ಇದಕ್ಕೆ ಜಮ್ಮು- ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ. “ತಮಗಾದ ಅವಮಾನದಿಂದಾಗಿ ಸರ್ಜಿಕಲ್‌ ದಾಳಿ ನಡೆಸಿದೆವು ಎಂದು ಪಾರೀಕರ್‌ ಹೇಳು ತ್ತಿದ್ದಾರೆ. ಹಾಗಾದರೆ, ಸರ್ಜಿಕಲ್‌ ದಾಳಿಯು ಉರಿ ದಾಳಿಗೆ ಪ್ರತೀಕಾರ ಎಂದಿದ್ದು ಸುಳ್ಳೇ’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next